Thursday, August 6, 2009

ಉದ್ಯೋಗಖಾತ್ರಿ ಯೋಜನೆಗೆ ಚಾಲನೆ

ಬಾಳೆಪುಣಿ ಗ್ರಾಮದ ಬಳ್ಳುಕೊರಗರ ಜಮೀನು ಅಭಿವೃದ್ಧಿಪಡಿಸಿ ತೆಂಗಿನತೋಟ ನಿರ್ವಹಣೆ ಕಾರ್ಯ ಆರಂಭಿಸಿ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಶಿವಶಂಕರ್, ಡಿ ಎಸ್ ಪ್ರಾಣೇಶ್ ರಾವ್, ಜಿ. ಪಂ. ಸದಸ್ಯರಾದ ಎ ಸಿ ಭಂಡಾರಿ, ಮಮತಾ ಗಟ್ಟಿ, ತಾ.ಪಂ. ಸದಸ್ಯ ಚಂದ್ರಹಾಸ ಕರ್ಕೆರಾ, ಉಮ್ಮರ ಫಜೀರಾ, ಗ್ರಾ.ಪಂ. ಅಧ್ಯಕ್ಷ ನಯನ ಮಾಣೈ, ಇಲಾಖಾಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ನರಿಂಗಾನದ ಪೊಟ್ಟೊಳಿಕೆ ಆದಿವಾಸಿ ಸಮುದಾಯದ ತನಿಯಾರು ಎಂಬವರ ಜಮೀನಿನಲ್ಲಿ ಅಡಿಕೆ ಗಿಡ ನೆಡುವುದರ ಮೂಲಕ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಡಿ ಎಸ್ ಪ್ರಾಣೇಶ್ ರಾವ್, ಜಿ. ಪಂ. ಸದಸ್ಯರಾದ ಎ ಸಿ ಭಂಡಾರಿ,ತಾ.ಪಂ. ಅಧ್ಯಕ್ಷ ಬಾಬು, ಸದಸ್ಯ ಚಂದ್ರಹಾಸ ಕರ್ಕೆರಾ ಮುಂತಾದವರು ಉಪಸ್ಥಿತರಿದ್ದರು.