Friday, August 21, 2009

ಶಾಂತಿಯುತವಾಗಿ ಹಬ್ಬಗಳ ಆಚರಣೆಗೆ ಸಹಕಾರ - ಸಮಿತಿ ಭರವಸೆ

ಮಂಗಳೂರು,ಆಗಸ್ಟ್ 21.ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಬರಲಿರುವ ಎಲ್ಲಾ ಹಬ್ಬಗಳು ಶಾಂತಿಯುತವಾಗಿ ನಡೆಯಲು ಬೇಕಾದ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡುವುದಾಗಿ ಸೌಹರ್ದ ಶಾಂತಿ - ಸಾಮರಸ್ಯ ಸಮಿತಿ ಸಭೆ ನಿರ್ಣಯಿಸಿದೆ. ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ನಿನ್ನೆಯಿಂದ ರಾತ್ರಿ ವೇಳೆ ಹೇರಲಾಗಿದ್ದ ನಿಷೇದಾಜ್ನೆಯಿಂದ ಜನಸಾಮನ್ಯರಿಗೆ ತೊಂದರೆ ಆಗುತಿದ್ದು, ಇದನ್ನು ಸಡಿಲಿಸಬೇಕೆಂಬ ಒತ್ತಾಯ ಸಭೆಯಲ್ಲಿ ವ್ಯಾಪಕವಾಗಿ ಕೇಳಿ ಬಂತು.ಸಭೆಯಲ್ಲಿ ಪಾಲ್ಗೊಂಡ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಧಾರ್ಮಿಕ ಮುಖಂಡರುಗಳು ಶಾಂತಿ-ಸೌಹರ್ದತೆಯನ್ನು ಕಾಪಾಡಲು ಬೇಕಾದ ಸಲಹೆಗಳನ್ನು ನೀಡಿದರು ಮತ್ತು ತಮ್ಮ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.ನಗರ ಪಾಲಿಕೆ ಮೇಯರ್ ಶ್ರೀ ಶಂಕರ್ ಭಟ್, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ,ಜಿಲ್ಲಾಧಿಕಾರಿ ಶ್ರೀ ಪೊನ್ನುರಾಜ್,ಎಸ್ಪಿ ಡಾ.ಸುಬ್ರಮಣ್ಯೇಶವರ ರಾವ್,ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮತ್ತಿತರು ಪಾಲ್ಗೊಂಡಿದ್ದರು.