Saturday, August 8, 2009

ಮಂಗಳೂರಿನಲ್ಲಿ ತೋಟಗಾರಿಕಾ ದಿನಾಚರಣೆ

ಮಂಗಳೂರು,ಆಗಸ್ಟ್8. ತೋಟಗಾರಿಕಾ ಪಿತಾಮಹಾ ದಿವಂಗತ ಡಾ.ಎಂ.ಹೆಚ್.ಮರಿಗೌಡ ಅವರ ಜನ್ಮಾದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಇಂದು ನಡೆಯಿತು.ತೋಟಗಾರಿಕ ಇಲಾಖೆ,ಜಿಲ್ಲಾ ಪಂಚಾಯತ್,ಮತ್ತು ಸಿರಿ ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಾಸಕ ಶ್ರೀ ಯೋಗಿಶ್ ಭಟ್ ಅವರು ಚಾಲನೆ ನೀಡಿದರು.ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ,ನಗರ ಪಾಲಿಕೆ ಮೇಯರ್ ಶ್ರೀ ಶಂಕರ್ ಭಟ್,ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಹೇಮಾ, ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಎನ್.ಸೋಮಯ್ಯ,ಮಂಗಳಾ ಕೆ., ನಗರ ಪಾಲಿಕೆ ಸದಸ್ಯರು ಮತ್ತು ಇತರ ಅಧಿಕಾರಿಗಳು,ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.