Monday, August 3, 2009

ರಸಗೊಬ್ಬರ ಬಳಕೆ ಬಗ್ಗೆ ರೈತರಿಗೆ ಸಲಹೆ

ಮಂಗಳೂರು,ಆ.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಯುಕ್ತ (ಕಾಂಪ್ಲೆಕ್ಸ್) ರಸಗೊಬ್ಬರ ಸರಬರಾಜಿನಲ್ಲಿ ಕೊರತೆ ಇದ್ದರೂ ಯೂರಿಯಾ, ರಾಕ್ ಪಾಸ್ಫೇಟ್,ಮ್ಯೂರಿಯೇಟ್ ಆಪ್ ಪೊಟ್ಯಾಷ್, ಡಿ ಎ ಪಿ 10:26:26:, 20:20:0:13 ರಸಗೊಬ್ಬರ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಮೇಲ್ಕಂಡ ಗೊಬ್ಬರಗಳು ಲಭ್ಯವಿದ್ದು, ಬೆಳೆಗಳ, ಪೋಷಕಾಂಶಗಳ ಅವಶ್ಯಕತೆಗೆ ತಕ್ಕಂತೆ ಬೆಳೆಗಳಿಗೆ ಉಪಯೋಗಿಸಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮಿಶ್ರಣ ಗೊಬ್ಬರ ಕೊಡುವ ಪೋಷಕಾಂಶಗಳ ಬಗ್ಗೆ ಮತ್ತು ಸಂಯುಕ್ತ ರಸಗೊಬ್ಬರ ಮಿಶ್ರಣ ತಯಾರಿಕೆ ಕೋಷ್ಟಕಗಳು ಎಲ್ಲಾ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ರೈತರು ಇಂಥದೇ ಗೊಬ್ಬರ ಬೇಕೆಂದು ಕಾಯದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.