Wednesday, September 4, 2013

ಜಿಲ್ಲೆಯಲ್ಲಿ 31,646 ಹೆಕ್ಟೇರ್ ನಲ್ಲಿ ಟನ್ ಭತ್ತ ಬಿತ್ತನೆ

ಮಂಗಳೂರು,ಸೆಪ್ಟೆಂಬರ್ 4:-ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು,ಆಗಸ್ಟ್ 31 ರ ವರೆಗೆ ಜಿಲ್ಲೆಯಲ್ಲಿ 31646 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆ  ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. ಜಿಲ್ಲೆಯ ಒಟ್ಟು ಐದು ತಾಲೂಕುಗಳಲ್ಲಿ ಭತ್ತ ಬಿತ್ತನೆ ಮಾಡಿದ ವಿವರ ಇಂತಿದೆ.
ಮಂಗಳೂರು ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 11,800 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,10,820 ಹೆಕ್ಟೇರ್ ಭತ್ತವನ್ನು ಬಿತ್ತನೆ ಮಾಡಿದ್ದು,91.6 ಶೇಕಡಾ ಗುರಿ ಸಾಧಿಸಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 9,500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,9,125 ಹೆಕ್ಟೇರ್ ಬಿತ್ತನೆಯಾಗಿದ್ದು,96,84 ಶೇಕಡಾ ಗುರಿ ಸಾಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 8,500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,8,175 ಹೆಕ್ಟೇರ್ ಬಿತ್ತನೆಯಾಗಿದ್ದು,96 ಶೇಕಡಾ ಗುರಿ ಸಾಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3,200 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,2,953 ಹೆಕ್ಟೇರ್ ಬಿತ್ತನೆಯಾಗಿದ್ದು,92 ಶೇಕಡಾ ಗುರಿ ಸಾಧಿಸಲಾಗಿದೆ.
ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,501 ಹೆಕ್ಟೇರ್ ಬಿತ್ತನೆಯಾಗಿದ್ದು,100 ಶೇಕಡಾ ಗುರಿ ಸಾಧಿಸಲಾಗಿದೆ.
            ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 31498 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಆಗಸ್ಟ್ 31 ರ ವರೆಗೆ ಒಟ್ಟು 483.50 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಪಡೆದು ಇಲ್ಲಿಯ ವರೆಗೆ 468.75 ಕ್ವಿಂಟಾಲ್ ವಿತರಿಸಲಾಗಿದೆ.
           ಮುಂಗಾರು ಹಂಗಾಮಿಗೆ ಒಟ್ಟು 18000 ಟನ್ ರಸಗೊಬ್ಬರ ಬೇಡಿಕೆ ಇದ್ದು,18,035 ಟನ್ ರಸಗೊಬ್ಬರ ವಿತರಣೆಯಾಗಿದ್ದು,8,220 ಟನ್ ದಾಸ್ತಾನು ಇದೆ. ಈ ಹಂಗಾಮಿನಲ್ಲಿ ಕರ್ನಾಟಕ ಸರ್ಕಾರದ ಜನಪ್ರಿಯ ಕೃಷಿ ಯೋಜನೆ ಭೂಚೇತನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 25,000 ಹೆಕ್ಟೇರ್ ನಲ್ಲಿ ಕೃಷಿ ಕಾರ್ಯ ಅತ್ಯಂತ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.