Tuesday, September 24, 2013

ಕೇಂದ್ರ ತಂಡದಿಂದ ಅತಿವೃಷ್ಟಿ ಹಾನಿ ಮಾಹಿತಿ ಸಂಗ್ರಹ

ಮಂಗಳೂರು, ಸೆಪ್ಟೆಂಬರ್ 24:- ಅತಿವೃಷ್ಟಿಯಿಂದಾದ ಅನಾಹುತಗಳ ಕುರಿತು ಸ್ಥಳ ಪರಿಶೀಲನೆಗೆ ದಕ್ಷಿಣ ಜಿಲ್ಲೆಗೆ ಆಗಮಿಸಿದ ಕೇಂದ್ರ ಪರಿಹಾರ ಸಮೀಕ್ಷಾ ತಂಡ ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲ್ಗಿ ಸಭೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಿದರು. ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್ ಕೆ ಶ್ರೀವಾಸ್ತವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರ ಜೊತೆಗೆ ಸಂಜಯ್ ಗಾರ್ಗ್ ಸಾರಿಗೆ ಮತ್ತು ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ,  ಮುರಳೀಧರನ್ ಹಿರಿಯ ಸಂಶೋಧನಾ ಅಧಿಕಾರಿ ಯೋಜನಾ ಆಯೋಗ ದೆಹಲಿ, ಡಾ ಕೆ ಮನೋಹರನ್ ನಿರ್ದೇಶಕರು ಪ್ರಭಾರ, ತಂಬಾಕು ಅಭಿವೃದ್ಧಿ ಇವರು ತಂಡದಲ್ಲಿದ್ದರು.
ಅತಿವೃಷ್ಟಿಯಲ್ಲಿ 18 ಜನರು ಒಟ್ಟಿಗೆ ಮೃತಪಟ್ಟಿದ್ದು, 16 ಜಾನುವಾರುಗಳ ಜೀವಹಾನಿಯಾಗಿದೆ. 909 ಮನೆಗಳು ಹಾನಿಗಳೊಗಾಗಿದೆ. 72 ಹೆಕ್ಟೆರ್ ವ್ಯಾಪ್ತಿಯಲ್ಲಿ ಕೃಷಿ ಹಾನಿಯಾಗಿದೆ. 547.35 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳು ಹಾನಿಗೊಳಗಾಗಿವೆ. ಸೇತುವೆ ಮತ್ತು ಕಿರುಸೇತುವೆ ಒಟ್ಟು 39 ಹಾನಿಯಾಗಿವೆ. ಸಣ್ಣ ನೀರಾವರಿ ಕಾಮಗಾರಿಗಳು 21 ಮಳೆಯಿಂದಾಗಿ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಮಾಹಿತಿ ನೀಡಿದರು.  ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ, ಸಹಾಯಕ ಆಯುಕ್ತರಾದ ಡಾ. ಪ್ರಶಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು.