Tuesday, September 17, 2013

ಅಧಿಕಾರಿಗಳು ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯಕ್

ಮಂಗಳೂರು, ಸೆಪ್ಟೆಂಬರ್.17:- ಬೆಳ್ತಂಗಡಿಯ ಮುಂಡಾಜೆ, ಕಡಿರುದ್ಯಾವರ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 200 ಎಕರೆಯಷ್ಟು ಭತ್ತದ ಕೃಷಿಗೆ ನೀರಿನ ಅಗತ್ಯವಿದ್ದು, ಇಲ್ಲಿನ ಮುಂಡಾಜೆ ಮತ್ತು ಒಳಂಬ್ರ ಅಳದಂಗಡಿ ಕಿಂಡಿ ಅಣೆಕಟ್ಟಿನ ಚಾನೆಲ್ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕೆಂದು ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಅವರು  ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಪಂಚಾಯತ್ನಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕಿಂಡಿ ಅಣೆಕಟ್ಟುಗಳ ವಾರ್ಷಿಕ ನಿರ್ವಹಣೆ ಕೊರತೆಯಿಂದ ಹಲಗೆಗಳು ಮತ್ತು ಚಾನೆಲ್ ಗಳು ಹಾಳಾಗಿದ್ದು, ಕೃಷಿಕರ ಹಿತವನ್ನು ಗಮನದಲ್ಲಿರಿಸಿ ಕಾಮಗಾರಿಯನ್ನು ಮುಗಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳಿಗೆ ಹೇಳಿದರು.
ಸುಳ್ಯ ತಾಲೂಕಿನ ಕಲ್ಮಕಾರು ಕಿಂಡಿ ಅಣೆಕಟ್ಟು ಕಾಮಗಾರಿಗೆ 12-13ನೇ ಸಾಲಿನಲ್ಲಿ ರೂ. 10 ಲಕ್ಷ ಅನುದಾನ ಮೀಸಲಿರಿಸಿದ್ದು ಪ್ರಸ್ತುತ ಸಾಲಿನಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2013ನೇ ಆಗಸ್ಟ್ ತಿಂಗಳಲ್ಲಿ ವಿಶೇಷ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಒಟ್ಟು 609 ಮಕ್ಕಳನ್ನು ಕಡಿಮೆ ತೂಕದ ಮಕ್ಕಳು ಎಂದು ಗುರುತಿಸಲಾಗಿತ್ತು. ಇವರಲ್ಲಿ 83 ಮಕ್ಕಳಿಗೆ ಬಾಲಸಂಜೀವಿನಿ ಯೋಜನೆಯಡಿ ನಗರದ ವೆನ್ಲಾಕ್, ಯೆನಪೋಯ, ಎ ಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಪಡಿಸಲಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಗಟ್ರೂಡ್ ವೇಗಸ್ ಅವರು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದರು.
ಮುಂದಿನ ಕೆಡಿಪಿ ಸಭೆಗೆ ಮುಂಚಿತವಾಗಿ ಎಲ್ಲ ಅಂಗನವಾಡಿಗಳಲ್ಲಿ ವಿದ್ಯುದ್ದೀಕರಣ ಸಂಪೂರ್ಣಗೊಳಿಸಬೇಕೆಂದು ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 2102 ಅಂಗನವಾಡಿ ಕೇಂದ್ರಗಳಿದ್ದು, 1624 ಸ್ವಂತ ಕಟ್ಟಡ ಹೊಂದಿದೆ. 1604 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಉಪನಿದರ್ೇಶಕರು ಸಭೆಗೆ ಮಾಹಿತಿ ನೀಡಿದರು.
ನಿಮರ್ಿತಿ ಕೇಂದ್ರದಿಂದ ಕೈಗೆತ್ತಿಕೊಳ್ಳಲಾದ ಮಳೆ ನೀರಿನ ಕೊಯ್ಲಿನ ಕಾಮಗಾರಿ ವ್ಯವಸ್ಥೆ ಕಲ್ಪಿಸಿರುವ ಶಾಲೆಗಳ ಪೈಕಿ 399 ಶಾಲೆಗಳಲ್ಲಿ ಮಾಹಿತಿ ಕಲೆ ಹಾಕಿದ್ದು, 118 ಶಾಲೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಸುಸ್ಥಿತಿಯಲ್ಲಿದೆ. 281 ಶಾಲೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ದುರಸ್ತಿಯ ಅಗತ್ಯವಿದೆ. ಈ ಎಲ್ಲ ದುರಸ್ತಿಗೆ ಅಂದಾಜು 20 ಲಕ್ಷ ರೂ. ಅನುದಾನ ಬೇಕಿದೆ ಎಂದು ಶಿಕ್ಷಣ ಅಧಿಕಾರಿಗಳು ಮಾಹಿತಿ ನೀಡಿದರು.
ಚಾಮರ್ಾಡಿಯಿಂದ ಉಜಿರೆಗೆ ಶೀಘ್ರದಲ್ಲೇ ಹೆಚ್ಚಿನ ಬಸ್ಸುಗಳನ್ನು ಪುತ್ತೂರು ವಿಭಾಗದಿಂದ ಆರಂಭಿಸುವುದಾಗಿ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ರೀತಿ ಮಂಗಳೂರು ಸುಬ್ರಹ್ಮಣ್ಯಕ್ಕೆ ಸಂಚರಿಸುವ ಬಸ್ಸುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಕಾಲಕ್ಕೆ ನಿಯಮಿತವಾಗಿ ಕಾಯರ್ಾಚರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ ಎಂದರು. ಬಸ್ಸುಗಳನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಕ್ರಮಕೈಗೊಂಡಿರುವುದಕ್ಕೆ ಅಧ್ಯಕ್ಷರು ಕ. ರಾ. ರಸ್ತೆ ಸಾರಿಗೆ ನಿಗಮದವರನ್ನು ಅಭಿನಂದಿಸಿದರು.
ಬಿಸಿಎಂ ಮತ್ತು ಐಟಿಡಿಪಿ ಇಲಾಖಾ ಹಾಸ್ಟೆಲ್ ಗಳಲ್ಲಿ ಇರುವ ಎಲ್ಲ ಅಡುಗೆಯವರ ನಿಯೋಜನೆ ರದ್ದುಪಡಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಜಿಲ್ಲೆಯ 203 ಪಂಚಾಯಿತಿಯಲ್ಲಿ ಕನಿಷ್ಠ ಪಂಚಾಯಿತಿ ಕಾರ್ಯದರ್ಶಿ ಅಥವಾ ಪಿಡಿಒ ಗಳಿರಲೇಬೇಕೆಂದ ಅಧ್ಯಕ್ಷರು, ಪ0ಚಾಯಿತಿ ಅಭಿವೃದ್ಧಿಗೆ ಇದು ಅತ್ಯಗತ್ಯ. ಹಾಗಾಗಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ ಎಂದರು. ಆಶ್ರಯ ಯೋಜನೆಯಡಿ ಜಮೀನು ಕಾದಿರಿಸಿ ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಮುಂದಿನ ಕೆಡಿಪಿಗೆ ಹತ್ತು ದಿನ ಮುಂಚಿತವಾಗಿ ಈ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡದಿದ್ದರೆ ಪ್ರಗತಿ ಪರಿಶೀಲನೆ ಸಭೆಯೇ ಕರೆಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು. ತಾಲೂಕುವಾರು ಇಒಗಳಿಂದ ಪ್ರಗತಿ ವಾಚಿಸಿದ ಅಧ್ಯಕ್ಷರು, ಅರ್ಹರಿಗೆ ಹಕ್ಕುಪತ್ರ ನೀಡಲು ಸಮಯಮಿತಿ ನಿಗದಿಪಡಿಸಿದರು.
ತೋಟಗಾರಿಕಾ ಇಲಾಖೆಯಲ್ಲಿ ಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ಹಾಗೂ ಈ ಸಂಬಂಧದ ದೂರುಗಳ ಬಗ್ಗೆ ಸಮಗ್ರ ತನಿಖೆಗೆ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದ ಅಧಿಕಾರಿ ಶಿವರಾಮಯ್ಯ ಅವರಿಗೆ ಹೊಣೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಹಿಸಿದರು.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ  ರಿತೇಶ್ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಫಕೀರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಕೃಷಿ ಮತ್ತು ಕೈಗಾರಿಕಾ ಶಿಕ್ಷಣ ಸ್ಥಾಯಿಸಮಿತಿಯ ಶ್ರೀಮತಿ ಜಯಶ್ರೀ, ಸಿಇಒ ತುಳಸಿಮದ್ದಿನೇನಿ, ಉಪಕಾರ್ಯದರ್ಶಿ ಎನ್ ಆರ್ ಉಮೇಶ್ ಉಪಸ್ಥಿತರಿದ್ದರು.