Wednesday, September 4, 2013

ಆಧಾರ್ ನೋಂದಣಿ ಕೇಂದ್ರಗಳಲ್ಲಿ ಹಾಜರಾತಿ ಕಡಿಮೆ;ನೋಂದಣಿ ಮಾಡಿಸಿಕೊಳ್ಳಿ-ಅಪರ ಜಿಲ್ಲಾಧಿಕಾರಿ


ಮಂಗಳೂರು, ಸೆಪ್ಟೆಂಬರ್.04:- ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹೊರತುಪಡಿಸಿ ಉಳಿಕೆ ಎಲ್ಲಾ ತಾಲೂಕುಗಳಲ್ಲಿರುವ 19 ಆಧಾರ್ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಲಾಲ್ಭಾಗ್,ಮಂಗಳೂರು, ಮಹಾನಗರಪಾಲಿಕೆ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ, ಸಮುದಾಯ ಭವನ ಪೆರ್ಮನ್ನೂರು,ಸಮುದಾಯ ಭವನ ಉಳ್ಳಾಲ,ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಕಟ್ಟಡ,ಲೈಟ್ ಹೌಸ್ ಹಿಲ್ ರಸ್ತೆ ಮಂಗಳೂರು,ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್,ಐಬಿ ನಾಡ ಕಚೇರಿ ಮೂಡಬಿದ್ರೆ, ಹಳೆ ತಾಲೂಕು ಪಂಚಾಯತ್ ಕಚೇರಿ,ಬಿ.ಸಿ.ರೋಡ್ ಬಂಟ್ವಾಳ,ಪಾಣೆಮಂಗಳೂರು ಶಾಲೆ ಬಂಟ್ವಾಳ,ಸಮುದಾಯ ಭವನ ಪುತ್ತೂರು,ಪಂಚಾಯತ್ ಕಚೇರಿ ವಿಟ್ಲ, ಗ್ರಾಮ ಪಂಚಾಯತ್ ಉಪ್ಪಿನಂಗಡಿ,ನಗರ ಪಂಚಾಯತ್ ಬೆಳ್ತಂಗಡಿ,ಗ್ರಾಮಪಂಚಾಯತ್ ಧರ್ಮಸ್ಥಳ,ಕಪಿತಾನಿಯೋ ಪಂಪ್ವೆಲ್,ರೊಜಾರಿಯೋ ಶಾಲೆ, ನಗರಪಂಚಾಯತ್ ಮೂಲ್ಕಿ,ಇನ್ಫೋಸಿಸ್, ಮುಡಿಪು, ಐಸಿಐಸಿ ಕಟ್ಟಡಗಳಲ್ಲಿರುವ ಆಧಾರ್ ಕೇಂದ್ರಗಳಲ್ಲಿ ದ್ವಿತೀಯ ಹಂತದ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು,ಸಾರ್ವಜನಿಕರು ಯಾವುದೇ ಶುಲ್ಕವನ್ನು ಪಾವತಿಸದೇ ತಮ್ಮ ನೊಂದಣಿಯನ್ನು ಮಾಡಬೇಕಾಗಿ ಅಪರ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.ನೋಂದಣಿ ಕೇಂದ್ರಗಳಲ್ಲಿ ಸಾರ್ವಜನಿಕರ ಹಾಜರಾತಿ ಕಡಿಮೆ ಇರುವುದು ಕಂಡು ಬರುತ್ತಿದೆ. ಆಧಾರ್ ಕಾರ್ಡ್  ಬಹು ಉಪಯೋಗಿ ಬಳಕೆಗಳಿಗೆ ಉಪಯೋಗಿಸಬಹುದಾದ ಗುರುತಿನ ಚೀಟಿಯಾಗಿದ್ದು, ಸಾರ್ವಜನಿಕರು ಸೆಪ್ಟೆಂಬರ್ ತಿಂಗಳ ಕೊನೆಯ ಒಳಗೆ ತಮ್ಮ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.