Saturday, September 21, 2013

ಎಂಡೋಪೀಡಿತರ ಸಮಗ್ರ ಅಭಿವೃದ್ಧಿಗೆ ಯೋಜನೆ: ವಿಶೇಷ ಸಭೆ

                  ಎಂಡೋಪೀಡಿತರ ಸಮಗ್ರ ಅಭಿವೃದ್ಧಿಗೆ ಯೋಜನೆ: ವಿಶೇಷ ಸಭೆ   
 ಮಂಗಳೂರು , ಸೆಪ್ಟೆಂಬರ್ 21;- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್/ನವೆಂಬರ್ 2012 ರಲ್ಲಿ ಎಂಡೋಪೀಡಿತರ ಸಮೀಕ್ಷೆ ನಡೆಸಿ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳ 310165 ಜನಸಂಖ್ಯೆಯಲ್ಲಿ 5223 ಶಂಕಿತ ಎಂಡೋಸಲ್ಫಾನ್ ಪೀಡಿತ ಖಾಯಿಲೆಗೆ ತುತ್ತಾಗಿರುವುದನ್ನು  ಪತ್ತೆಹಚ್ಚಲಾಗಿತ್ತು. ಇವರಲ್ಲಿ 179 ಸಂಪೂರ್ಣ ಎಂಡೋಪೀಡಿತ ಬಾಧಿತರಾಗಿ ಮಲಗಿದಲ್ಲೇ ಇರುತ್ತಾರೆ ಎಂದು ಆರೋಗ್ಯ ಇಲಾಖೆ ಕಾರ್ಯಕರ್ತೆಯರ ಸಮೀಕ್ಷೆ ಮಾಹಿತಿ ನೀಡಿತ್ತು. ಬಳಿಕ ನಡೆದ ಸಮಗ್ರ ಸಮೀಕ್ಷೆಯಲ್ಲಿ 2,479 ಮಂದಿ ಎಂಡೋಪೀಡಿತರು ಎಂದು ಕಂಡುಬಂದಿದೆ ಎಂದು ಇಲಾಖೆ ಸಭೆಗೆ ಮಾಹಿತಿ ನೀಡಿದೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತು. ಬಂಟ್ವಾಳದ 3 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 43213 ಜನಸಂಖ್ಯೆಯಲ್ಲಿ 680 ಎಂಡೋಪೀಡಿತ ಕಾಯಿಲೆಯಿಂದ ನರಳುವವರು, 26 ಜನರು ಮಲಗಿದ್ದಲ್ಲೇ ಇದ್ದಾರೆ. ಬೆಳ್ತಂಗಡಿಯಲ್ಲಿ 6 ಪಿಎಚ್ ಸಿ ವ್ಯಾಪ್ತಿಯಲ್ಲಿ 75973 ಜನಸಂಖ್ಯಾ ವ್ಯಾಪ್ತಿಯಲ್ಲಿ 2445 ಶಂಕಿತ ಎಂಡೋಪೀಡಿತರು, 53 ಜನರು ಮಲಗಿದ್ದಲ್ಲೇ ಇದ್ದಾರೆ. ಸುಳ್ಯದ 3 ಪಿಎಚ್ ಸಿ ವ್ಯಾಪ್ತಿಯಲ್ಲಿ 38807 ಜನಸಂಖ್ಯೆಯಲ್ಲಿ 726 ಶಂಕಿತರಲ್ಲಿ 39 ಜನ ಮಲಗಿದ್ದಲೇ ಇದ್ದಾರೆ. ಪುತ್ತೂರಿನ 11 ಪಿಎಚ್ ಸಿ ವ್ಯಾಪ್ತಿಯಲ್ಲಿ 152172 ಜನಸಂಖ್ಯೆಯಲ್ಲಿ 1372 ಶಂಕಿತರು, 61 ಜನರು ಮಲಗಿದ್ದಲ್ಲೇ ಇದ್ದಾರೆ.
ಪ್ರಾಥಮಿಕ ಸಮೀಕ್ಷೆಯಲ್ಲಿ ದೈಹಿಕ ಅಂಗವಿಕಲತೆ, ಮಾನಸಿಕ ಅಸ್ವಸ್ಥತೆ, ಬುದಿ ಮಾಂದ್ಯತೆ, ಅಪಸ್ಮಾರ, ಅಬರ್ುದ ಪ್ರಕರಣಗಳು,ಪಾಶ್ವವಾಯು, ಬಂಜೆತನ ಮತ್ತು ಗರ್ಭಪಾತ ಇತ್ಯಾದಿ.
ಎಂಡೋಸಲ್ಫಾನ್ ಸಂಬಂಧಿತ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 15, ಸಂಪೂರ್ಣ ಹಾಸಿಗೆ ಡಿದವರು 130, ತೀವ್ರ ಬುದ್ದಿ ಮಾಂದ್ಯತೆ (%40 ಅಂಗವಿಕಲತೆ)-376. ಇತರ ಅಂಗವಿಕಲತೆ (%40 ಮತ್ತು ತೀವ್ರ ಸಂಬಂಧಿತ ಕ್ಯಾನ್ಸರ್ ನಿಂದ ಬಳಲುತ್ತಿರುವವರು -1056.

ಒಟ್ಟು 1934 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. 73 ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಪೀಡಿತರು. 161 ಕುಟುಂಬ ಮುಖ್ಯಸ್ಥ ಬಾಧಿತರು. 130 ಸಂಪೂರ್ಣ ಹಾಸಿಗೆ ಹಿಡಿದವರು. ಸಂಪೂರ್ಣ ಹಾಸಿಗೆ ಹಿಡಿದವರಿಗೆ/ತೀವ್ರ ಬುದ್ದಿಮಾಂದ್ಯತೆ ಮತ್ತು ಸಹಾಯ ಇಲ್ಲದೆ ಚಲಿಸಲಾಗದಂತವರಿಗೆ ಮತ್ತು ಸತ್ತವರ ವಾರಸುದಾರರಿಗೆ ರೂ. 5 ಲಕ್ಷ. ಇತರೆ ಅಂಗವಿಕಲತೆ ಇರುವವರಿಗೆ ರೂ. 3 ಲಕ್ಷ. ವೈದ್ಯಕೀಯ ಸೌಲಭ್ಯಗಳನ್ನು ನೀಡುವುದು.
ಇವರೆಲ್ಲ ಸಮಸ್ಯೆ ಪರಿಹಾರಕ್ಕೆ ಸಾಮಾನ್ಯ ಸಮಿತಿ (ಎಂಡೋಲ್ಫಾನ್ ಕಲ್ಯಾಣ) ರಚಿಸಲಾಗಿದೆ. ಸಮಿತಿಯ ಅಧಿಕಾರಿಗಳು ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವುದು. ಗುರುತಿಸಿದವರಿಗೆ ಸ್ಮಾಟ್ರ್  ಕಾರ್ಡು ನೀಡುವ ಮುಖಾಂತರ ಉಚಿತ ವೈದ್ಯಕೀಯ ಸೇವೆಯನ್ನು ನೀಡುವುದು. ಅಂಗವಿಕಲತೆ ಹೊಂದಿರುವವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡುವುದು. ಗ್ರಾಮ ಪಂಚಾಯತ್ ಗೆ ಸ್ಟಾಫ್ ನಸ್ರ್ ನ್ನು ನೀಡಿ ಮನೆಯಲ್ಲಿಯೇ ಹಾಸಿಗೆಯ ಮೇಲೆ ಹಾಸಿಗೆ ಹಿಡಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಏರ್ಪಾಡು ಮಾಡುವುದು. ಮೊಬೈಲ್ ಮೆಡಿಕಲ್ ಯುನಿಟನ್ನು ನೀಡುವುದು. ಉಚಿತಜ ಆಹಾರವನ್ನು ಎಂಡೋಸಲ್ಫಾನ್ ಪೀಡಿತರಿಗೆ ಒದಗಿಸುವುದು. ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಅದರ ನಿವಾರಣೆಗೆ ಯಾವುದಾದರು ಒಂದು ವಿಶೇಷ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.