Monday, April 2, 2012

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 635 ವಿದ್ಯಾರ್ಥಿಗಳು ಗೈರುಹಾಜರು

ಮಂಗಳೂರು.ಏಪ್ರಿಲ್.02:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಒಟ್ಟು 31987 ವಿದ್ಯಾರ್ಥಿಗಳು ನೊಂದಾಯಿಸಿಕೊಡಿದ್ದು, ಇಂದು ನಡೆದ ಭಾಷಾವಾರು ಪರೀಕ್ಷೆಗೆ 31352 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 635 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಸದಾನಂದ ಪೂಂಜ ಅವರು ತಿಳಿಸಿದ್ದಾರೆ.
ಇಂದು ನಡೆದ ಕನ್ನಡ ಭಾಷೆ ಪರೀಕ್ಷೆಗೆ 26962 ಮಕ್ಕಳು ನೊಂದಾಯಿಸಿಕೊಂಡಿದ್ದು ಅವರಲ್ಲಿ 26346 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು 616ವಿದ್ಯಾರ್ಥಿಗಳು ಗೈರು, ಆಂಗ್ಲಭಾಷಾ ಪರೀಕ್ಷೆಗೆ ನೊಂದಾಯಿಸಿದ್ದ 3663 ವಿದ್ಯಾರ್ಥಿಗಳಲ್ಲಿ 3654 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಸಂಸ್ಕೃತ ಭಾಷಾ ಪರೀಕ್ಷೆಗೆ 1145 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು ಅವರಲ್ಲಿ 1139 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಹಿಂದಿ ಭಾಷಾ ಪರೀಕ್ಷೆಗೆ 131 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಅವರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಗೈರು ಹಾಜರಾಗಿದ್ದಾರೆ.ಉರ್ದು ಭಾಷಾ ಪರೀಕ್ಷೆಗೆ ನೋಂದಾಯಿಸಿದ್ದ 86 ವಿದ್ಯಾರ್ಥಿಗಳಲ್ಲಿ 83 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ಸದಾನಂದ ಪೂಂಜ ಅವರು ತಿಳಿಸಿದ್ದಾರೆ.