Monday, April 30, 2012

ಸಂಸದರ ನಿಧಿಯಿಂದ 5ಕಾಮಗಾರಿಗೆ ಅನುದಾನ ಬಿಡುಗಡೆ

ಮಂಗಳೂರು, ಎಪ್ರಿಲ್.30:ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಲೋಕ ಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರ 2009-10 ನೇ ಸಾಲಿನ ಅನುದಾನದಿಂದ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ತಾಲೂಕು ಪಡುಕೋಡಿ ಗ್ರಾಮದ ಪಂಜಿಮೊಗರು ಎಂಬಲ್ಲಿ ಮೊಗೇರ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.1.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ. 75 ಸಾವಿರಗಳನ್ನು ಬಿಡುಗಡೆ ಮಾಡಲಾಗಿದೆ.
2010-11 ನೇ ಸಾಲಿನ ಅನುದಾನದಿಂದ ದಕ್ಷಿಣಕನ್ನಡ ಜಿಲ್ಲಾ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ-ಸಾಲಿಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.3.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.2.25 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಆದ್ಯಪಾಡಿ ಗ್ರಾಮದ ಬೀಬಿಲಚ್ಚಿಲ್ ದೇವಸ್ಥಾನದ ಬಳಿ ರಸ್ತೆ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.3.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.2.25 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
2010-11 ನೇ ಸಾಲಿನ ಅನುದಾನದಿಂದ ದಕ್ಷಿಣಕನ್ನಡ ಜಿಲ್ಲಾ ಮಂಗಳೂರು ತಾಲೂಕು ಪಡುಪೆರಾರು ಗ್ರಾಮದ ಮರೋಳಿಪದವುನಿಂದ ಪೆಜತ್ತಾಯ ಮನೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.2.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.1.50 ಲಕ್ಷಗಳನ್ನು , ಕಿಲೆಂಜಾರು ಗ್ರಾಮದ ಕಲ್ಲಾಡಿ ನಾಗೋಜಿಬೈಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.2.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.1.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.