Thursday, October 28, 2010

'ಯೋಜನೆಗಳ ಯಶಸ್ಸಿಗೆ ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ'

ಮಂಗಳೂರು,ಅಕ್ಟೋಬರ್ 28: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿ ಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ; ಇದಕ್ಕೆಂದೇ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಎ. ಸಿ. ಭಂಡಾರಿ ಅವರು ಹೇಳಿದರು.
ಅವರಿಂದು ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುರ್ನಾಡು, ಜನ ಶಿಕ್ಷಣ ಟ್ರಸ್ಟ್ ಮತ್ತು ನರಿಂಗಾನ ಗ್ರಾಮ ಪಂಚಾ ಯತ್ ಇವರ ಸಂಯುಕ್ತ ಆಶ್ರಯ ದಲ್ಲಿ ಏರ್ಪಡಿ ಸಲಾದ ಕುಟುಂಬ ಕಲ್ಯಾಣ ಪಾಕ್ಷಿಕ ಅಂಗವಾಗಿ ಏರ್ಪಡಿ ಸಲಾದ ವಿಚಾರ ಸಂಕಿರ ಣವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಪ್ರಸಕ್ತ ಸನ್ನಿ ವೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಿಂದ ಸೌಲಭ್ಯಗಳು ಲಭ್ಯ ವಾಗುವಂತೆ ಯೋಜನೆಗಳು ರೂಪು ಗೊಂಡಿವೆ. ಅರ್ಹ ಫಲಾನು ಭವಿಗಳಿಗೆ ಸೌಲಭ್ಯಗಳು ತಲುಪಲು ಎಲ್ಲರು ಒಗ್ಗಟ್ಟಿನಿಂದ ಶ್ರಮ ಪಡಬೇಕು ಎಂದು ಅವರು ಹೇಳಿದರು.ನರಿಂಗಾನ ಗ್ರಾಮ ಪಂಚಾಯಿತಿ ಮತ್ತು ಜನರು ಸಕ್ರಿಯವಾಗಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡು ಯೋಜನೆಗಳ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯೋಜನೆಗಳ ಯಶಸ್ವಿ ಯಾಗಲು ಸಾಧ್ಯ ಎಂದರು. ಸ್ವಚ್ಛತೆ ಮತ್ತು ಪರಿಸರ ಪರಸ್ಪರ ಪೂರಕವಾಗಿದ್ದು ಜನರು ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಲು ಆದ್ಯತೆ ನೀಡಬೇಕೆಂದರು.ಆರೋಗ್ಯವೇ ಭಾಗ್ಯ ಆರೋಗ್ಯ ವನ್ನು ದಾನ ವಾಗಿ ಅಥವಾ ಖರೀದಿ ಮಾಡಲು ಸಾಧ್ಯವಿಲ್ಲ. ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಯನ್ನು ಹೊಂದಿರ ಬೇಕಾದುದು ಹಾಗೂ ನಮ್ಮ ಭವಿಷ್ಯದ ಮಾನವ ಸಂಪನ್ಮೂ ಲವಾದ ಇಂದಿನ ಮಕ್ಕಳ ಪಾಲನೆ ಪೋಷಣೆ ಬಗ್ಗೆ ಕುರ್ನಾಡು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯ ಕಿಯರಾದ ಸುಭಾಷಿಣಿ ವಿವರಿಸಿದರು. ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ನರಿಂ ಗಾನ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾದ ಇಸ್ಮಾಯಿಲ್ ಮೀನಂ ಕೋಡಿ ಅವರು, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ಘೋಷ ವಾಕ್ಯ ಪ್ರತಿ ಹಳ್ಳಿಗೂ ತಲು ಪಿದ್ದು, ದೇಶದ ಉದ್ದಾರ ಹಳ್ಳಿಗ ಳಿಂದ ಹಳ್ಳಿಗಳ ಉದ್ದಾರ ಆರೋಗ್ಯ ವಂತ ಸಮಾಜ ದಿಂದ, ಆರೋಗ್ಯ ವಂತ ಮಕ್ಕಳಿಂದ ಆರೋ ಗ್ಯವಂತ ಸಮಾಜ ರೂಪು ಗೊಳ್ಳಲಿ ಎಂದು ಹಾರೈಸಿದರು.ನರಿಂಗಾನ ಗ್ರಾಮ ಪಂಚಾಯಿತಿ ಉಪಾಧ್ಯ ಕ್ಷರಾದ ಸುಮಿತ್ರ, ಸದಸ್ಯ ರಾದ ಜೋಸೆಫ್, ಗ್ರಾಮ ಪಂಚಾಯಿ ತಿಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ ನಳಿನಿ, ಅಂಗನ ವಾಡಿ ಕಾರ್ಯ ಕರ್ತರು, ಆಶಾ ಕಾರ್ಯ ಕರ್ತರು ಉಪಸ್ಥಿತರಿದ್ದರು.ಕಾರ್ಯ ಕ್ರಮಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋಪಿನಾಥ್ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಇಂದು ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ವಿತರಿಸ ಲಾಯಿತಲ್ಲದೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಬಹುಮಾನ ನೀಡಲಾಯಿತು.ಕ್ಷೇತ್ರ ಪ್ರಚಾರ ನಿರ್ದೇಶ ನಾಲಯದ ಕ್ಷೇತ್ರ ಪ್ರಚಾರಾ ಧಿಕಾರಿ ಟಿ. ಬಿ. ನಂಜುಂಡ ಸ್ವಾಮಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ನರಿಂಗಾನ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾದ ಕೇಶವ ಅವರು ಕಾರ್ಯ ಕ್ರಮ ನಿರೂಪಿ ಸಿದರು. ರೋಶನಿ ಕಾಲೇಜಿನ ಎಂ. ಎಸ್. ಡಬ್ಲ್ಯೂ ವಿದ್ಯಾರ್ಥಿ ಯಾದ ಸಂತೋಷ್ ವಂದಿಸಿದರು.