Saturday, October 23, 2010

ದ.ಕ ಜಿಲ್ಲಾಧಿಕಾರಿಯಾಗಿ ಸುಬೋದ್ ಯಾದವ್ ಅಧಿಕಾರ ಸ್ವೀಕಾರ

ಮಂಗಳೂರು,ಅಕ್ಟೋಬರ್ 23:ದಕ್ಷಿಣ ಕನ್ನಡ ಜಿಲ್ಲೆಯ 121ನೇ ಜಿಲ್ಲಾಧಿಕಾರಿಯಾಗಿ ಸುಬೋದ್ ಯಾದವ್ ಅವರು ಇಂದು ಅಧಿಕಾರ ಸ್ವೀಕರಿಸಿದರು. 1999ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಇವರು ಮೂಲತ: ಉತ್ತರಪ್ರದೇಶದವರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರ ಆಪ್ತಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಳಗಾಂವ್ ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ಆರಂಭಿಸಿದ ಇವರು, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಹಾಯಕ ಆಯುಕ್ತರಾಗಿ ನೇಮಕಗೊಂಡರು.ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಅಪರಿಚಿತವಲ್ಲ. 2004 ಆಗಸ್ಟ್ 29ರಿಂದ 2005 ಮೇ 31ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ.ಬಳಿಕ ಬೆಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತರಾಗಿದ್ದರು. ಗುಲ್ಬರ್ಗಾ ಸಿಇಒ ಆದ ಬಳಿಕ ಮಡಿಕೇರಿ ಜಿಲ್ಲಾಧಿಕಾರಿಗಳಾಗಿದ್ದರು.ಚಿಕ್ಕಬಳ್ಳಾಪುರದ ಪ್ರಥಮ ಜಿಲ್ಲಾಧಿಕಾರಿಯಾಗಿದ್ದರು ಗದಗ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಯಾಗಿದ್ದರು.ಕಳೆದ ವರ್ಷ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಹಳಷ್ಟು ಬದ ಲಾಗಿದ್ದು, ಪ್ರಮುಖ ಜಿಲ್ಲೆ ಗಳಲ್ಲಿ ಒಂದೆಂಬ ಸ್ಥಾನಮಾನ ಪಡೆದಿ ರುವ ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿ ಕವಾಗಿ ಪ್ರಯತ್ನಿ ಸುವೆ ಎಂದರು. ವಿಮಾನ ನಿಲ್ದಾಣ ದಿಂದ ನಗರಕ್ಕೆ ಬರುವಾಗ ಕಾಂಕ್ರಿಟ್ ರಸ್ತೆಗಳು ಮತ್ತು ನಗರೀಕರಣ ಗಮನ ಸೆಳೆಯಿತು ಎಂದು ಹೇಳಿದರು.ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ಹಮ್ಮಿಕೊಂಡ ಅಭಿವೃದ್ಧಿ ಕೆಲಸಗಳನ್ನು ಮುಂದು ವರಿಸು ವುದಾಗಿ ಹೇಳಿದ ಅವರು,ಎಲ್ಲರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ತಮ್ಮ ಯೋಜನೆಗಳು, ವಿಷನ್ ಬಗ್ಗೆ ಈಗಲೇ ಹೇಳುವುದರಲ್ಲಿ ಅರ್ಥವಿರುವುದಿಲ್ಲ ಎಂದ ಅವರು, ವಿಷಯ ಗಳನ್ನು ತಿಳಿದು ಕೊಂಡು ಆಡಳಿತ ನಡೆಸು ವುದಾಗಿ ಪತ್ರ ಕರ್ತರಿಗೆ ಉತ್ತರಿಸಿದರು. ದಕ್ಷಿಣ ಕನ್ನಡದ 120 ನೇ ಜಿಲ್ಲಾಧಿಕಾರಿ ಯಾಗಿದ್ದ ಪೊನ್ನುರಾಜ್ ಅವರು ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗಕ್ಕೆ ವರ್ಗಾವಣೆ ಗೊಂಡಿದ್ದಾರೆ. ಅವರು ಜಿಲ್ಲಾಡಳಿತದಲ್ಲಿ ತಂದಿದ್ದ ಮಾರ್ಪಾಡುಗಳ ಬಗ್ಗೆ ಮಾಹಿತಿಯಿದ್ದು,ಜಿಲ್ಲೆ ಕಂಪ್ಯೂಟರೀಕರಣ ಸೇರಿದಂತೆ ಹಲವು ಪ್ರಥಮಗಳನ್ನು ಸಾಧಿಸಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಹೇಳಿದರು.