Monday, October 11, 2010

ಡಾ.ಕೆ. ಶಿವರಾಂ ಕಾರಂತರ ಹುಟ್ಟುಹಬ್ಬ

ಮಂಗಳೂರು,ಅ.10: ಪುರಭವನದಲ್ಲಿ ಭಾನುವಾರ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಸಾಹಿತ್ಯಪರಿಷತ್ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ವಾಗಿ ಆಚರಿಸ ಲಾಯಿತು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಮಕ್ಕಳ ಮೇಳದಿಂದ ತೆಂಕು ತಿಟ್ಟು ಯಕ್ಷಗಾನ ಬಯಲಾಟ ಪಾಂ ಚಜನ್ಯ ಮತ್ತು ಕೃಷ್ಣ ಯಾಜಿ ಬಳಗದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಏರ್ಪಡಿಸ ಲಾಯಿತ ಲ್ಲದೆ, ಕಾರಂತರ ಕುರಿತು ಕಾರ್ಡಿನಲ್ಲಿ ಚಿತ್ರ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗ ವಹಿಸಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಕಾರ್ಯಕ್ರಮ ಅರ್ಥ ಪೂರ್ಣ ವಾಗಿ ಮೂಡಿಬಂತು. ಇದೇ ಸಂದರ್ಭದಲ್ಲಿ ಹಿರಿಯ ವಿದ್ವಾಂಸ, ಜಾನಪದ ಸಂಶೋಧಕ ಡಾ.ಅಮೃತ ಸೋಮೇಶ್ವರ ಅವರಿಗೆ ಕಾರಂತ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಹಿರಿಯ ಸಾಹಿತಿ ಏರ್ಯಾ ಲಕ್ಷ್ಮೀ ನಾರಾಯಣ ಆಳ್ವ,ಮಂಗಳೂರು ವಿವಿ ಕುಲಸಚಿವರಾದ ಡಾ.ಚಿನ್ನಪ್ಪ ಗೌಡ ಮತ್ತಿತರ ಗಣ್ಯರು ಸಮಾ ರಂಭದಲ್ಲಿ ಪಾಲ್ಗೊಂಡಿದ್ದರು.