Friday, October 22, 2010

ಸಾರ್ವಕಾಲಿಕ ಸತ್ಯ ಸಂದೇಶ ನೀಡಿದ ವಾಲ್ಮೀಕಿಗೆ ಸರ್ಕಾರದ ಗೌರವ: ಸಚಿವ ಕೃಷ್ಣ ಜೆ. ಪಾಲೆಮಾರ್

ಮಂಗಳೂರು,ಅಕ್ಟೋಬರ್ 22: ಸಾರ್ವಕಾಲಿಕವಾಗಿ ಜನಜೀವನದ ಮೇಲೆ ಪರಿಣಾಮ ಬೀರುವ ಮೌಲ್ವಿಕ ಸಂದೇಶ ನೀಡಿದ ಮಹರ್ಷಿ ವಾಲ್ಮೀಕಿಯ ಸ್ಮರಣೆಯನ್ನು ಮನಗಂಡ ಸರ್ಕಾರ ವಾಲ್ಮೀಕಿ ಜಯಂತಿ ಆಚರಿಸಿ ಗೌರವ ಸಮರ್ಪಿಸಲು ಸರ್ಕಾರಿ ರಜೆಯನ್ನು ಘೋಷಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗ ರಾವ್ ಸ್ಮಾರಕ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ದಲ್ಲಿ ಆಯೋಜಿ ಸಲಾಗಿದ್ದ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆ ಯನ್ನುದ್ದೇಶಿಸಿ ಮಾತನಾ ಡುತ್ತಿದ್ದರು. ವಾಲ್ಮೀಕಿ ಯವರ ಜೀವನ ಮತ್ತು ರಾಮಾ ಯಣ ಜಗತ್ತಿಗೆ ಮಾದರಿ ಯಾಗಿದ್ದು, ಇಂತಹವರ ಸ್ಮರಣೆ ಉತ್ತಮ ಸಮಾಜದ ಅಭಿವೃದ್ಧಿಗೆ ಪೂರಕ ವಾಗಿರುತ್ತದೆ ಎಂದು ಅವರು ನುಡಿದರು.ಕಾರ್ಯ ಕ್ರಮ ಉದ್ಘಾಟಿಸಿ ಮಾತ ನಾಡಿದ ಶಾಸಕ ರಾದ ಎನ್. ಯೋಗೀಶ್ ಭಟ್ ಅವರು, ಬೇಡನೊಬ್ಬ ಋಷಿಯಾಗಿ, ಕವಿಯಾಗಿ ಮಾರ್ಪಾಡು ಗೊಂಡ ಬಗ್ಗೆ, ರಾಮಾಯಣ ಹಾಗೂ ರಾಮ ಭಾರತವನ್ನು ಮೀರಿ ವ್ಯಾಪಿಸಿರುವ ಬಗ್ಗೆ, ರಾಮ ರಾಜ್ಯದ ಕಲ್ಪನೆ ಬಗ್ಗೆ ಮಾತ ನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಮಾತನಾಡಿದರು. ವಿಶೇಷ ಆಹ್ವಾನಿತರಾದ ಶಾಸಕರಾದ ಯು. ಟಿ. ಖಾದರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಶಾಂತಾ ಆರ್, ವಾಲ್ಮೀಕಿ ಸಂಘದ ಅಧ್ಯಕ್ಷರಾದ ಹಾಲೇಶಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಭಾಷಣಗಾರರಾದ ಪ್ರೊ. ಕೆ. ಅಭಯ್ ಕುಮಾರ್, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ, ಮಾನವೀಯ ಸಂದೇಶಗಳನ್ನು ನೀಡಿದ ವಾಲ್ಮೀಕಿಯ ಬಗ್ಗೆ ಪ್ರತಿಯೊಬ್ಬರು ತಿಳಿದಿರಬೇಕು. ಹಿಂಸೆಯಿಂದ ಅಹಿಂಸೆಗೆ ತಿರುಗಿದ ವಾಲ್ಮೀಕಿಯ ಜೀವನ, ತಪಸ್ಸು ಮತ್ತು ಏಕಾಗ್ರತೆಯಿಂದ ನಡೆಸಿದ ಸಾಧನೆ, ಶೋಕದಿಂದ ಶ್ಲೋಕ ನಿರ್ಮಾಣವಾದ ರೀತಿ, ರಾಮ ನಾಮವನ್ನು ತಾರಕಕ್ಕೇರಿಸಿದ ಕೀರ್ತಿ ವಾಲ್ಮೀಕಿಯದ್ದು ಎಂದರು.
ಸಮಾರಂಭದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ಮಂಜುನಾಥ್ ಉಪಸ್ಥಿತರಿದ್ದರು. ಬಿಸಿಎಂ ಅಧಿಕಾರಿ ಎಸ್. ಎಸ್. ಕಾಳೆ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ವಂದಿಸಿದರು.