Wednesday, October 13, 2010

'ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಮೀನುಗಾರಿಕೆ ಕೊಡುಗೆ ಗಮನೀಯ'

ಮಂಗಳೂರು,ಅಕ್ಟೋಬರ್ 13: ಕರಾವಳಿ ನಗರಿ ದಕ್ಷಿಣ ಕನ್ನಡ ಜಿಲ್ಲೆ ಮೀನುಗಾರಿಕೆಗೆ ಹೆಸರು ವಾಸಿ. ಮೀನು ಉತ್ತಮ ಪೌಷ್ಠಿಕ ಆಹಾರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ ವಾಗಿದ್ದು, ಸುಮಾರು 42 ಕಿ.ಮೀ ಉದ್ದವಿರುವ ಕರಾವಳಿಯ ಈ ಜಿಲ್ಲೆ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದೆ. ವಿದೇಶಿ ವಿನಿಮಯದ ಒಂದು ಪ್ರಮುಖ ಸಂಪನ್ಮೂಲವಾಗಿದೆಯಲ್ಲದೆ ಜಿಲ್ಲೆಯ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜಿಲ್ಲೆಯಲ್ಲಿ ಸುಮಾರು 21 ಮೀನು ಗಾರಿಕಾ ಗ್ರಾಮ ಗಳಿದ್ದು, ಅದರಲ್ಲಿ 52,218 ಮೀನುಗಾರರು ವಾಸಿಸು ತ್ತಿದ್ದಾರೆ. ಸುಮಾರು 27,597 ಮೀನು ಗಾರರು ವೃತ್ತಿ ನಿರತ ರಾಗಿದ್ದಾರೆ. ಜಿಲ್ಲೆಯಲ್ಲಿ 60 ಪರ್ಸಿನ್ ದೋಣಿಗಳೂ, 950 ಟ್ರಾಲರ್ ದೋ ಣಿಗಳೂ, 1021 ಯಾಂತ್ರೀಕೃತ ನಾಡ ದೋಣಿಗಳು ಹಾಗೂ 242 ಯಾಂತ್ರೀ ಕೃತವಲ್ಲದ ನಾಡ ದೋಣಿಗಳು ಮೀನು ಗಾರಿಕೆಯಲ್ಲಿ ನಿರತವಾಗಿದೆ. ವಾರ್ಷಿಕ ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ನಷ್ಟು ಪ್ರಮಾಣದ ಮೀನು ಹಿಡಿಯುವ ಅವಕಾಶವಿದ್ದು, 09 - 10ನೇ ಸಾಲಿನಲ್ಲಿ 408 ಕೋಟಿ ರೂ. ಮೌಲ್ಯದ 90345 ಮೆ. ಟನ್ ಮೀನು ಉತ್ಪಾದನೆ ಯಾಗಿದೆ. ಇವುಗಳಲ್ಲಿ ವಿದೇಶಿ ವಿನಿಮಯ ತರುವ ರಫ್ತಿಗೆ ಯೋಗ್ಯ ಸಿಗಡಿ,ಬೊಂಡಾಸ್, ಪಾಂಪ್ರೆಟ್, ಅಂಜಲ್, ಪಿಂಕ್ ಪರ್ಚ್, ರಿಬ್ಬನ್ ಫಿಶ್ ಮೊದಲಾದ ಮೀನುಗಳು ಸೇರಿವೆ. ಮೀನುಗಾರಿಕೆ ಉದ್ಯಮಕ್ಕೆ ಪೂರಕವಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ 1025 ಮೆ.ಟನ್ ಸಾಮರ್ಥ್ಯದ 61 ಮಂಜುಗೆಡ್ಡೆ ಕಾರ್ಖಾನೆಗಳು, 12 ಶೀತಲೀಕರಣ ಸ್ಥಾವರಗಳೂ,5 ಘನೀಕರಣ ಘಟಕಗಳು, 14 ಫಿಶ್ ಮೀಲ್ ಘಟಕಗಳು, 9 ಬೋಟ್ ಬಿಲ್ಡಿಂಗ್ ಘಟಕಗಳು ಹಾಗೂ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ರಫ್ತು ಮಾಡುವ 8 ಸಂಸ್ಕರಣ ಘಟಕಗಳನ್ನು ಒಳಗೊಂಡಿದೆ.ಮೀನುಗಾರಿಕೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಮೀನುಗಾರರ ಸಹಕಾರಿ ಸಂಘಗಳಿದ್ದು, 4 ಮೀನುಗಾರರ ಮಹಿಳೆಯರ ಸಂಘವೂ ಇದೆ. 23 ಮೀನುಗಾರರ ಸಹಕಾರಿ ಸಂಘದಲ್ಲಿ ಒಟ್ಟು 26,228 ಸದಸ್ಯರಿರುತ್ತಾರೆ. ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 3 ಸಹಾಯಕ ನಿರ್ದೇಶ ಕರಿದ್ದಾರೆ.ಜಿಲ್ಲೆಯಲ್ಲಿ ಒಳನಾಡು ಮೀನು ಗಾರಿಕೆಯನ್ನು ಪ್ರೋತ್ಸಾಹಿಸಲು ಇಲಾಖಾ ವತಿಯಿಂದ ಪಿಲಿಕುಳ ದಲ್ಲಿ ಮೀನು ಪಾಲನಾ ಕೇಂದ್ರ ನಿರ್ಮಿಸ ಲಾಗಿದೆ. ಇಲ್ಲಿ ಉತ್ತಮ ತಳಿಯ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಮುಂತಾದ ಮೀನು ಮರಿಗಳನ್ನು ಖಾಸಗಿ ಕೃಷಿಕರಿಗೆ ವಿತರಿಸ ಲಾಗುತ್ತಿದೆ.ಮೀನು ಮರಿ ಉತ್ಪಾದನೆ ಮತ್ತು ಸಾಕಣೆ, ಹಂಚಿಕೆ, ವಾಹನ ನಿರ್ವಹಣೆಗೆ 1,53,000 ಅನುದಾನ ನಿಗದಿ ಯಾಗಿದೆ. ಈ ಕಾರ್ಯ ಕ್ರಮ ದಡಿ ಜಿಲ್ಲೆಯಾ ದ್ಯಂತ ಸುಮಾರು 75,000 ಮೀನು ಮರಿಗಳನ್ನು ಸಣ್ಣ ಕೆರೆ, ಬಾವಿಗಳಲ್ಲಿ ಬಿತ್ತುವ ಗುರಿಯನ್ನು ಇಲಾಖೆ ಹೊಂದಿದೆ. ಮೀನುಗಾರಿಕ ದೋಣಿಗಳಲ್ಲಿ ಜೀವ ರಕ್ಷಣಾ ಸಾಧನಗಳನ್ನು ಅಳವಡಿಸಲು ಸಹಾಯಧನ ನೀಡಲಾಗುವುದು. ಸಮುದ್ರದ ಹಿನ್ನೀರಿನಲ್ಲಿ ಮೀನುಮರಿ ಬಿತ್ತನೆಗೆ ಅದರಲ್ಲೂ ಮುಖ್ಯವಾಗಿ ಸಿಗಡಿ ಸಾಕಾಣಿಕೆಗೆ ಅನುದಾನ ನಿಗದಿ ಪಡಿಸಲಾಗಿದೆ. ತಾಜಾ ಮೀನುಗಳನ್ನು ದೂರದ ಸ್ಥಳಗಳಿಗೆ ಮಾರಾಟಕ್ಕಾಗಿ ಉತ್ತಮ ಸ್ಥಿತಿಯಲ್ಲಿ ಸಾಗಿಸಲು ಅನುಕೂಲವಾಗುವಂತೆ ಶಾಖ ನಿರೋಧಕ ಪೆಟ್ಟಿಗೆಗಳನ್ನು ಹೊಂದಲು ಮಹಿಳಾ ಮೀನುಗಾರರಿಗೆ ಸಹಾಯಧನ ಒದಗಿಸಲಾಗುವುದು. ಸೈಕಲ್, ಮೊಪೆಡ್, ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಲು ಇಲಾಖೆಯಲ್ಲಿ ಸೌಲಭ್ಯವಿದೆ. ಮೀನುಗಾರಿಕೆ ವಸ್ತುಗಳ ಖರೀದಿಗೆ ಸಹಕಾರಿ ಸಂಘಗಳಿಗೆ ಸಾಲಗಳಿದ್ದು, ಸಾಂಪ್ರಾದಾಯಿಕ ಮೀನುಗಾರರಿಗೆ ಬೇಕಾದ ಬಲೆ, ಪ್ಲೋಟ್ಸ್, ನೈಲಾನ್ ರೋಪ್ ಇತ್ಯಾದಿ ಸಲಕರಣೆ ಖರೀದಿಗೆ ಮೀನುಗಾರಿಕಾ ಸಹಕಾರಿ ಸಂಘದ ಅರ್ಹ ಸದಸ್ಯರಿಗೆ ಸಹಕಾರ ಸಂಘದ ಮೂಲಕ ಗರಿಷ್ಠ 6,000 ರೂ. ಸಾಲ ಸೌಲಭ್ಯ ನೀಡಲಾಗುವುದು. ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿಸಿದರೆ ಅದರಲ್ಲೂ ಗರಿಷ್ಠ 2000 ರೂ. ಮೊತ್ತವನ್ನು ಸಹಾಯ ಧನವನ್ನಾಗಿ ಪರಿವರ್ತಿಸ ಲಾಗುವುದು. ಪ್ರಸ್ತುತ ಸಾಲಿನಲ್ಲಿ 30 ಮಂದಿಗೆ 6,000 ದಂತೆ ಸಾಲ ನೀಡಲು 1,80,000 ರೂ. ಅನುದಾನ ಕಾಯ್ದಿರಿಸಿದೆ. ಈ ಯೋಜನೆ ಗಳಲ್ಲದೆ ಸಾಂಪ್ರಾ ದಾಯಿಕ ದೋಣಿ ಗಳನ್ನು ಯಾಂತ್ರೀ ಕರಿಸುವ ಕೇಂದ್ರ ಪುರಸ್ಕೃತ ಯೋಜನೆ, ರಾಜ್ಯ ವಲಯ ಯೋಜನೆ ಗಳು ಹಲವಾರಿವೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಮೀನುಗಾರಿಕ ಉಪ ನಿರ್ದೇಶಕರು, ಮೀನುಗಾರಿಕಾ ಮಾಹಿತಿ ಕೇಂದ್ರ ಕಟ್ಟಡ ಒಂದನೇ ಮಹಡಿ, ಬಂದರು ಮಂಗಳೂರು, ದೂ.ಸಂ. 2425680, ಮೀನುಗಾರಿಕ ಹಿರಿಯ ಸಹನಿರ್ದೇಶಕರು, ಎರಡನೇ ಮಹಡಿ,ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ದೂ.ಸಂ.2451292.ಮೀನುಗಾರಿಕ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಬಂದರು ಕಚೇರಿ ಕಟ್ಟಡ ಮಂಗಳೂರು, ದೂ.ಸಂ. 2429317. ಮೀನುಗಾರಿಕ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಮಾಹಿತಿ ಕೇಂದ್ರ ಕಟ್ಟಡ, ಬಂದರು ಮಂಗಳೂರು, ದೂ.ಸಂ. 2421680 ಇವರನ್ನು ಸಂಪರ್ಕಿಸಬಹುದು.