Monday, October 4, 2010

ಗ್ರಾಮಸಭೆ ಮತದಾರರ ಹಕ್ಕು: ಸಿಇಒ ಶಿವಶಂಕರ್

ಮಂಗಳೂರು, ಅಕ್ಟೋಬರ್ 04 : ಜಾಗೃತ ಜನರಿಂದ ಮಾತ್ರ ವಿಕೇಂದ್ರೀಕೃತ ವ್ಯವಸ್ಥೆಯ ಪ್ರಮುಖ ವ್ಯವಸ್ಥೆಯಾಗಿರುವ ಗ್ರಾಮಸಭೆಗಳು ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗ್ರಾಮಸಭಾ ವರ್ಷಾಚರಣೆ 2009-10ರ ಅಂಗವಾಗಿ ಏರ್ಪಡಿಸಿದ್ದ ಪಂಚಾಯತ್ ರಾಜ್ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಯಾರಿಗೆ ಬೇಕು ಗ್ರಾಮಸಭೆ ಎಂಬುದನ್ನೇ ಮುಖ್ಯ ಪ್ರಶ್ನೆ ಯಾಗಿಸಿ, ನಾಗರೀಕರ ಸಕ್ರಿಯ ಪಾಲ್ಗೊ ಳ್ಳುವಿಕೆ ಮಾತ್ರ ಗ್ರಾಮ ಸಭೆಗೆ ನಿರೀಕ್ಷಿತ ಯಶಸ್ಸನ್ನು ತಂದು ಕೊಡಲು ಸಾಧ್ಯ ಎಂದ ಸಿಇಒ ಅವರು, ಜನರನ್ನು ಕತ್ತಲೆ ಯಲ್ಲಿರಿಸಿ ನಡೆಸುವ ಅಭಿವೃದ್ಧಿ ಕಾಮ ಗಾರಿಗಳು ನಿರೀಕ್ಷಿತ ಫಲ ನೀಡುವುದು ಅಸಾಧ್ಯ ಎಂದರು.ಗ್ರಾಮ ಪಂಚಾಯತ್ ಗಳು ಫಲಾನು ಭವಿಗಳ ಗುರುತಿ ಸುವಿಕೆ, ಆದ್ಯತೀಕರಣ ಮತ್ತು ಆಯ್ಕೆ ನಿರ್ದಿಷ್ಟ ಮಾರ್ಗ ಸೂತ್ರಗಳನ್ನು ಅಳವಡಿ ಸುವು ದರಿಂದ ಇಲ್ಲಿನ ನಿರ್ಣಯಗಳು ಪರಿಣಾಮ ಕಾರಿಯಾ ಗಿರುತ್ತದೆ. ಸಬ್ಜೆಕ್ಟಿವಿಟಿ ಬಿಟ್ಟು ಅಬ್ಜೆಕ್ಟಿವಿಟಿಗೆ ಹೆಚ್ಚಿನ ಆದ್ಯತೆ ನೀಡು ವಂತಾಗ ಬೇಕು. ಜನರಿಗೆ ವ್ಯವಸ್ಥೆಯ ಮೇಲಿನ ನಿರಾಸಕ್ತಿ ಫಲಾನು ಭವಿಗಳ ಕೊರತೆಗೆ ಎಡೆ ಮಾಡಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸರಕಾರೇತರ ಸಂಘಸಂಸ್ಥೆಗಳ ಪ್ರೋತ್ಸಾಹಕಾರಿ ಕರ್ತವ್ಯ ನಿರ್ವಹಣೆ ಇಲ್ಲಿ ಅಗತ್ಯ ಎಂದರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿಯನ್ನು, ಉನ್ನತೀಕರಣವನ್ನೊಂದು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿಯ ಹೊಸ ಪರಿಭಾಷೆಯನ್ನು ಬರೆಯಬೇಕು. ಗ್ರಾಮಕ್ಕೆ ಮುಂದಿನ ಐದು ವರ್ಷಗಳಲ್ಲಿ ಏನೇನು ಅಗತ್ಯವಿದೆಯೆಂಬುದನ್ನು ಮನಗಂಡು ಮೊದಲೇ ಯೋಜನೆ ರೂಪಿಸುವಂತಾಗಬೇಕು ಎಂದರು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಒಂಬಡ್ಸ ಮನ್ ಎನ್. ಶೀನ ಶೆಟ್ಟಿ ಅವರು, ಗ್ರಾಮಸಭೆಗಳು ಸಂಘರ್ಷಗಳ ತಾಣವಾಗದೆ ಸಂವಾದಗಳ ತಾಣವಾಗಬೇಕು. ಗ್ರಾಮಸಭೆಗಳಲ್ಲಿ ವಿಶ್ವಾಸ ಮೂಡಿ, ತಳಮಟ್ಟದಿಂದ ವ್ಯವಸ್ಥೆ ಸಶಕ್ತವಾದರೆ ಮಾತ್ರ ವಿಕೇಂದ್ರೀಕೃತ ವ್ಯವಸ್ಥೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದರು. ಇಚ್ಛಾಶಕ್ತಿ, ಜ್ಞಾನ ಮತ್ತು ಕ್ರಿಯಾಶಕ್ತಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ವಿಷಯ ಮಂಡನೆ ಮಾಡಿದ ಪತ್ರಕರ್ತ ಎನ್ ಟಿ ಗುರು ವಪ್ಪ ಬಾಳೆ ಪುಣಿ ಅವರು, ಗ್ರಾಮ ಸಭೆಗಳ ನಿರ್ಣಯಗಳ ಬಗ್ಗೆ, ಕಾರ್ಯ ಸೂಚಿಗಳ ಬಗ್ಗೆ, ಪ್ರಸಕ್ತ ಇರುವ ವ್ಯವಸ್ಥೆಯ ಬಗ್ಗೆ ಅವ ಲೋಕಿಸಿದಾಗ ಸಮಾ ಧಾನಕಾರ ಕಾರ್ಯ ವ್ಯವಸ್ಥೆ ಇಲ್ಲ ಎಂದರು. ಗ್ರಾಮಸಭೆಗಳು ಜನರ ಉತ್ಸವ ಗಳಾಗಬೇಕು. ಇಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಅಗತ್ಯ ಪ್ರಾಮ್ಯುಖತೆ ದೊರೆಯಬೇಕು. ಮಾನವ ಸಂಪನ್ಮೂಲಗಳ ಸದ್ಬಳಕೆ ಯಾಗಬೇಕು ಎಂದು ಅವರು ತಮ್ಮ ವಿಷಯ ಮಂಡನೆಯಲ್ಲಿ ತಿಳಿಸಿದರು. ಗ್ರಾಮಸಭೆಗಳಲ್ಲಿ ಸಾಮೂಹಿಕ ಚರ್ಚೆಗಳಾಗಬೇಕು. ವೇದಿಕೆಗಳಿರಬಾರದು. ಕಂದಾಯ ಗ್ರಾಮಕ್ಕೊಂದು ಗ್ರಾಮಸಭೆಗಳನ್ನು ಆಯೋಜಿಸಬೇಕು ಎಂದು ಸಲಹೆ ಮಾಡಿದರು..
ಕಾರ್ಯಾ ಗಾರದ ಸಭಾ ಕಾರ್ಯ ಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಸಂತೋಷ್ ಕುಮಾರ್ ಭಂಡಾರಿ ಅವರು, ಗ್ರಾಮ ಸಭೆಗೆ ಆದ್ಯತೆ ನೀಡಿ; ಗ್ರಾಮೀಣರ ಮೂಲಭೂತ ಸೌಕರ್ಯ ಗಳನ್ನು ಈಡೇರಿಸಿ, ಗ್ರಾಮ ಸಭೆಗಳು ಜನರಿಗೆ ಸವಲತ್ತು ದೊರಕುವ ಸಭೆ ಗಳಾಗಲಿ ಎಂದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಎ ಸಿ ಭಂಡಾರಿ, ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ, ಮುಖ್ಯ ಲೆಕ್ಕಾಧಿಕಾರಿ ಎ. ಎಸ್ ರಾಮದಾಸ್, ಯೋಜನಾ ನಿರ್ದೇಶಕರಾದ ಸೀತಮ್ಮ ವೇದಿಕೆಯಲ್ಲಿದ್ದರು. ಕ್ಷೇತ್ರ ಪ್ರಚಾರಾಧಿಕಾರಿ ಟಿ ಬಿ ನಂಜುಂಡಸ್ವಾಮಿ ಸ್ವಾಗತಿಸಿದರು. ಮುಖ್ಯ ಯೋಜನಾಧಿಕಾರಿ ಟಿ.ಜೆ ತಾಕತ್ ರಾವ್ ವಂದಿಸಿದರು.