Monday, October 4, 2010

ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ:ನಕ್ಸಲರಿಗೆ ಐಜಿಪಿ ಅಲೋಕ್ ಮೋಹನ್ ಕರೆ

ಮಂಗಳೂರು,ಅ.04: ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಮತ್ತು ಸರ್ಕಾರದ ನಕ್ಸಲ್ ಪ್ಯಾಕೆಜನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಪಶ್ಚಿಮ ವಲಯ ಪೋಲಿಸ್ ಮಹಾನಿರೀಕ್ಷಕರಾದ ಅಲೋಕ್ ಮೋಹನ್ ಅವರು ನಕ್ಸಲರಿಗೆ ಕರೆ ನೀಡಿದ್ದಾರೆ.
ಮಂಗಳೂರಿ ನಲ್ಲಿನ ತಮ್ಮ ಕಚೇರಿ ಯಲ್ಲಿಂದು ಮಾದ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ಮುಖ್ಯ ವಾಹಿನಿಗೆ ಬರಲು ಈ ಯೋಜನೆ ಒಂದು ಉತ್ತಮ ಅವಕಾಶ ಎಂದರು. ನಕ್ಸಲ್ ಚಟುವಟಿಕೆ ಗಳಲ್ಲಿ ತೊಡಗಿ ರುವವರನ್ನು Red Zone(ಪಟ್ಟಿ ಮಾಡಲಾಗಿರುವ ಭೂಗತ ಸದಸ್ಯರು),Grey Zone(ಪಟ್ಟಿ ಮಾಡಲಾಗದ ಭೂಗತ ಸದಸ್ಯರು) ಹಾಗೂ Green Zone (ನಕ್ಸಲ್ ಚಟುವಟಿಕೆಗಳಲ್ಲಿ ಸಮಾಜದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು) ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 2010 ರ ಜೂನ್ 19 ರಂದು ಪ್ರಕಟಗೊಂಡಿರುವ ನಕ್ಸಲ್ ಶರಣಾಗತಿ ಪ್ಯಾಕೇಜ್ ಹಿನ್ನೆಲೆಯಲ್ಲಿ ಈಗಾಗಲೇ ಶೃಂಗೇರಿ ಪ್ರದೇಶದಲ್ಲಿ ನಕ್ಸಲರ ನಾಯಕನಾಗಿ ಗುರುತಿಸಲ್ಪಟ್ಟಿದ್ದ ವೆಂಕಟೇಶ್ ಎಂಬಾತ ಕೆಲ ದಿನಗಳ ಹಿಂದಷ್ಟೆ ಶೃಂಗೇರಿಯಲ್ಲಿ ಪೋಲಿಸರಿಗೆ ಶರಣಾಗತ ನಾಗಿರುವುದು ಸಂತಸದ ವಿಷಯ ಎಂದರು. ಪ್ರಸ್ತುತ ಶರಣಾಗತನಾಗಿರುವ ವೆಂಕಟೇಶ್ Red zone ನ ಗಂಪಿಗೆ ಸೇರಲ್ಪಟ್ಟಿದ್ದು, ಶರಣಾಗತಿ ಯಾಗಿರುವುದರಿಂದ ಈತನ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಭರವಸೆ ನೀಡಲಾಗಿದೆ ಎಂದು ಐಜಿಪಿ ತಿಳಿಸಿದರು.ಶರಣಾ ಗತನಾದ ನಕ್ಸಲ್ ವ್ಯಕ್ತಿಯ ಮೇಲಿನ ಪ್ರಕರಣಗಳನ್ನು ಎಷ್ಟು ಸಮಯ ದೊಳಗೆ ಹಿಂದಕ್ಕೆ ತೆಗೆಯ ಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಜಿಪಿ ಅಲೋಕ್ ಮೋಹನ್, ಶರಣಾಗತಿ ಹೊಂದಿದ ನಕ್ಸಲ್ ವ್ಯಕ್ತಿಯ ಮೇಲಿನ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಸರಕಾರ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಿದೆ ಎಂದರು. ಮಾತ್ರವಲ್ಲದೆ, ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭ ಕೆಲವೊಂದು ಷರತ್ತುಗಳಿಗೆ ಕೂಡಾ ಆತ ಬದ್ದನಾಗಿರಬೇಕಾಗುತ್ತದೆ. ಜೊತೆಗೆ ಆತನಿಗೆ ಸರ್ಕಾರದ ರಕ್ಷಣೆಯನ್ನೂ ಖಾತರಿ ಪಡಿಸಲಾಗುತ್ತದೆ. ಶರಣಾಗತರಾಗುವ ನಕ್ಸಲರು ಸಾಲ ಸೌಲಭ್ಯ, ಭೂಮಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಈ ಪ್ಯಾಕೇಜ್ ನ ಅಡಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಅಯೋಧ್ಯೆ ವಿವಾದಿತ ಭೂಮಿಯ ಬಗ್ಗೆ ನ್ಯಾಯಾಲಯದ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಜಿಲ್ಲೆಯ ಜನತೆ ಶಾಂತಿಯನ್ನು ಕಾಯ್ದುಕೊಂಡದ್ದಕ್ಕೆ ಈ ಸಂದರ್ಭ ಸಂತಸ ವ್ಯಕ್ತಪಡಿಸಿದರು.