Sunday, October 24, 2010

ರಾಜ್ಯಮಟ್ಟದ ಪುಸ್ತಕ ಮೇಳಕ್ಕೆ ಚಾಲನೆ

ಮಂಗಳೂರು,ಅ 24:ಮಂಗಳೂರು ನಗರದ ನೆಹರು ಮೈದಾನಿನಲ್ಲಿ ಡಾ. ಕೆ.ಶಿವರಾಂ ಕಾರಂತ ಕಲಾಮಂಟಪದಲ್ಲಿ 8 ದಿನಗಳ ಕಾಲ ನಡೆಯಲಿರುವ ಬೃಹತ್ತ್ ಪುಸ್ತಕ ಮೇಳಕ್ಕೆ ಚಾಲನೆ ದೊರೆತಿದೆ.ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ನಡೆಯ ಲಿರುವ ಈ ಪುಸ್ತಕ ಮೇಳಕ್ಕೆ ರಾಜ್ಯ ಬಂದರು, ಮುಜ ರಾಯಿ,ಪರಿಸರ ಮತ್ತು ಜೀವಿ ಶಾಸ್ತ್ರ,ಹಾಗೂ ಜಿಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಚಾಲನೆ ನೀಡಿದರು.ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷರಾದ ಡಾ.ಸಿದ್ದ ಲಿಂಗಯ್ಯ,ಶಾಸಕ ರುಗಳಾದ ಎನ್.ಯೋಗಿಶ್ ಭಟ್,ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮೇಯರ್ ರಜನಿ ದುಗ್ಗಣ್ಣ,ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಧಿಕಾರಿ ಅಶೋಕ್ ಎನ್.ಚಲವಾದಿ,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಹಿರಿಯ ಸಾಹಿತಿ ಏರ್ಯಾ ಲಕ್ಷ್ಮೀನಾರಾಯಣ ಆಳ್ವಾ ಮತ್ತಿತರ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಪುಸ್ತಕ ಮೇಳದ ಜೊತೆ ಪ್ರತಿ ದಿನ ಲೇಖಕರು,ಪ್ರಕಾಶಕರು,ಮಾರಾಟಗಾರರು ಮತ್ತು ಓದುಗರ ಮಧ್ಯೆ ಸಂವಾದ,ಚಿಂತನ ಕಮ್ಮಟಗಳು,ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.