Thursday, September 23, 2010

ಅಯೋಧ್ಯೆ ತೀರ್ಪು -ಶಾಂತಿ ಕಾಪಾಡುವ ಹಿನ್ನಲೆ:ಜಿಲ್ಲಾಡಳಿತ ಹೊರಡಿಸಿದ ಆದೇಶ ರದ್ದು

ಮಂಗಳೂರು,ಸೆ.23:ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.24ರಂದು ಮಾನ್ಯ ಅಲಹಾಬಾದ್ ಉಚ್ಛ ನ್ಯಾಯಾಲಯ ತೀರ್ಪು ನೀಡುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕಾರಣ ಶಾಂತಿ ಸುವ್ಯವಸ್ಥೆ ಸಂಬಂಧಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಾರಿಗೆ ತಂದಿದ್ದ ಎಲ್ಲ ಆದೇಶ/ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.
ಸೆಕ್ಷನ್ 144, ಶಾಲಾ-ಕಾಲೇಜುಗಳಿಗೆ ರಜೆ, ಮದ್ಯದಂಗಡಿ, ಪಟಾಕಿಯಂಗಡಿ ಬಂದ್, ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ಆದೇಶ ಅಧಿಸೂಚನೆಗಳು ರದ್ದಾಗಿವೆ.