Monday, September 6, 2010

ಕ್ವೀನ್ಸ್ ಬ್ಯಾಟನ್ ಗೆ ಔಪಚಾರಿಕ ಬೀಳ್ಕೊಡುಗೆ

ಮಂಗಳೂರು,ಸೆ.06: ದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾ ಕೂಟದ ಪೂರ್ವಭಾವಿ ಅಭಿಯಾನದ ಅಂಗವಾಗಿ ನಿನ್ನೆ ಜಿಲ್ಲೆಗೆ ಆಗಮಿಸಿದ ಕ್ವೀನ್ಸ್ ಬ್ಯಾಟನ್ ತಂಡಕ್ಕೆ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ ಅವರು ಪುರಭ ವನದಲ್ಲಿ ಔಪ ಚಾರಿಕ ಬೀಳ್ಕೊ ಡುಗೆ ನೀಡಿ ದರು.ತಂಡದ ನೇತೃತ್ವ ವಹಿಸಿದ ವಿ.ಎನ್ ಸಿಂಗ್ ಗೆ ಬ್ಯಾಟನ್ ನ್ನು ಹಸ್ತಾಂ ತರಿಸಿದ ಅಪರ ಜಿಲ್ಲಾಧಿ ಕಾರಿಗಳು ಶುಭ ಹಾರೈ ಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀ ಲ್ದಾರ್ ಮಂಜುನಾಥ್, ಯುವಜನ ಮತ್ತು ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ,ಅಥ್ಲೀಟ್ ನವೀನ್ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸರು ಜಿಲ್ಲೆಯ ಗಡಿ ಮುಲ್ಕಿವರೆಗೆ ತೆರಳಿ ತಂಡವನ್ನು ಬೀಳ್ಕೊಟ್ಟರು.ತಂಡ ಉಡುಪಿ ಜಿಲ್ಲೆಯ ಮೂಲಕ ಕಾರವಾರ ತಲುಪಲಿದೆ.