Thursday, July 15, 2010

ಅದಿರು ನಿಷೇಧ ಉಲ್ಲಂಘನೆ: ನಾಲ್ಕು ಲಾರಿಗಳ ವಶ

ಮಂಗಳೂರು,ಜು.15: ಜಿಲ್ಲೆಯಲ್ಲಿ ಅದಿರು ಲಾರಿಗಳನ್ನು ನಿಷೇಧಿಸಿ ಹೊರಡಿಸಿರುವ ಆಜ್ಞೆಯನ್ನು ಉಲ್ಲಂಘಿಸಿ ಅದಿರು ಸಾಗಾಟ ನಡೆಸುತ್ತಿದ್ದ ನಾಲ್ಕು ಲಾರಿಗಳನ್ನು ನವ ಮಂಗಳೂರು ಬಂದರು ಬಳಿ ಸಹಾಯಕ ದಂಡಾಧಿಕಾರಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಶಕ್ಕೆ ತೆಗೆದು ಕೊಂಡು ಪಣಂಬೂರು ಪೋಲಿಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿ ಸಿದ್ದಾರೆ. 20.06.2010 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದಿರು ಲಾರಿಗಳನ್ನು ನಿಷೇದಿಸಲಾಗಿತ್ತು.ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಮಂಗಳೂರು,ಬೆಲೆಕೇರಿ ಮತ್ತು ಕಾರವಾರ ಬಂದರುಗಳಿಂದ ಅದಿರು ರಫ್ತು ಮಾಡುವುದನ್ನು ನಿಷೇಧಿಸಿದೆ.ಇದರ ಹೊರತಾಗಿಯೂ ನವಮಂಗಳೂರು ಬಂದರಿನ ಮೂಲಕ ಅದಿರು ಸಾಗಾಟ ನಡೆಯುತ್ತಿದ್ದು, ಮತ್ತು ನಿಷೇಧವಿದ್ದರೂ ಜಿಲ್ಲೆಯನ್ನು ಪ್ರವೇಶಿಸುತ್ತಿರುವ ಅದಿರು ಲಾರಿಗಳ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.