Friday, July 23, 2010

ಗ್ರಾಮಾಂತರ ವಾಸಿಗಳಿಗೂ ಬಂದೂಕು ತರಬೇತಿ: ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್

ಮಂಗಳೂರು,ಜು.22:ಪೊಲೀಸ್ ಮತ್ತು ನಾಗರೀಕ ಸ್ನೇಹಿ ಯೋಜನೆಗಳಡಿ ಆಗಸ್ಟ್ ಮೊದಲವಾರದಿಂದ ಗ್ರಾಮಾಂತರ ಪ್ರದೇಶದ ನಾಗರೀಕರಿಗೆ ಬಂದೂಕು ತರಬೇತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.
ನಗರ ಪೊಲೀಸ್ ಕಮಿಷ ನರೇಟ್ ವತಿಯಿಂದ ಬಂದೂಕು ತರಬೇತಿ ಪಡೆದ ನಾಗ ರೀಕರಿಗೆ ಇಂದು ಪೊಲೀಸ್ ಅತಿಥಿ ಗೃಹದಲ್ಲಿ ಏರ್ಪಡಿ ಸಲಾಗಿದ್ದ ಪ್ರಮಾಣ ಪತ್ರ ವಿತರಣಾ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾ ಡುತ್ತಿದ್ದರು. ಅಧ್ಯಕ್ಷತೆಯನ್ನು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ವಹಿಸಿದ್ದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಡಿಸಿಪಿಗಳಾದ ಮುತ್ತೂರಾಯ ಮತ್ತು ರಮೇಶ್ ಉಪಸ್ಥಿ ತರಿದ್ದರು. ಎಸಿಪಿ ಬಿ.ಜೆ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.