Wednesday, July 28, 2010

ಭಾರಧ್ವಾಜ ಆಶ್ರಮದಲ್ಲಿ ಸಾವಯವ ಕೃಷಿ..

ಮಂಗಳೂರು,ಜು.28:ಪ್ರಕೃತಿ ಇರುವುದು ಮಾನವನ ಅಗತ್ಯಗಳನ್ನು ಪೂರೈಸಲು,ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದರು. ಕಾಲಚಕ್ರ ಸುತ್ತುತ್ತಿರುತ್ತದೆ;ಮಾನವ ಪ್ರಕೃತಿಯೊಂದಿಗೆ ಪೂರಕ ಬದುಕನ್ನು ನಡೆಸಬೇಕು.ಸಾವಯವ ಕೃಷಿಗೆ ಇಂದು ಕೃಷಿಕರು ಮರಳುತ್ತಿರುವುದು ಇದನ್ನೇ ಸಾಬೀತು ಪಡಿಸುತ್ತದೆ.
ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆ ಹೆಚ್ಚಾಯಿ ತಾದರೂ, ಕೃಷಿ ಭೂಮಿಯ ಮೇಲೆ ದುಷ್ಪರಿಣಾ ಮಗಳಾದವು. ಮಿತಿಮೀರಿದ ರಾಸಾಯಿ ನಿಕಗಳ ಬಳಕೆ ಯಿಂದ ಭೂಮಿಯ ಫಲವತ್ತತೆ ಕಡಿಮೆ ಯಾಯಿತು. ಕೃಷಿಕರು ಹಲವು ಸಮಸ್ಯೆಗಳನ್ನು,ಸವಾಲುಗಳನ್ನು ಎದುರಿಸಲು ಆರಂಭಿ ಸಿದರು. ಗೊಬ್ಬರ ಕೊರತೆಯ ಬಿಸಿ ರಾಜ್ಯಾಡ ಳಿತವನ್ನೇ ಅಲುಗಾಡಿಸಿತು. ಇಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಸಾವಯವ ಕೃಷಿ ಜನಪ್ರಿಯ ವಾಗ ಲಾರಂಭಿಸಿತು.ಸರ್ಕಾರವು ಇದಕ್ಕೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಲಾ ರಂಭಿಸಿತು.ಸಾವಯವ ಕೃಷಿ ಮಿಷನ್ ಸ್ಥಾಪಿಸಿತು. ಸಾವಯವ ಕೃಷಿ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.

ಈ ಕಾಲ ಘಟ್ಟದಲ್ಲಿ ಇಂತಹ ಯಾವುದೇ ಆಕರ್ಷ ಣೆಗಳಿಗೆ ಒಳಗಾಗದೆ ಕೃಷಿ ವಲಯದ ಎಲ್ಲ ಸವಾಲು ಗಳನ್ನು ಎದುರಿಸಿ ಸಾವಯವ ಬೆಳೆಗಾ ರರಿಗೆ ಸ್ಫೂರ್ತಿಯಾಗಿ 1972 ರಿಂದಲೇ ಸುಳ್ಯದ ಭಾರದ್ವಾಜ ಕುಟುಂಬ ದವರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ ಸಾರ್ಥಕ ಬದುಕು ನಡೆಸು ತ್ತಿದ್ದಾರೆ. ಸುಳ್ಯದ ಅರಂಬೂ ರಿನಲ್ಲಿ ಪಯಸ್ವಿನಿ ನದಿ ಮೂರು ದಿಕ್ಕನ್ನು ಸುತ್ತುವರಿ ದಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಸಹೋದರರು 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ಮಾಡು ತ್ತಿದ್ದಾರೆ; ಹಸಿವನ್ನು ನೀಗಿಸುವ ಕಾಯಕದಲ್ಲಿ ತೊಡಗಿ ಕೊಂಡಿದ್ದಾರೆ. 12 ಜನ ಸಹೋದರರು ಕೃಷಿಯಲ್ಲಿ ತೊಡಗಿದ್ದು, ಇವರಲ್ಲೊಬ್ಬರು ಸಿವಿಲ್ ಇಂಜಿನಿಯರ್ ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ಧಿಯನ್ನು ಪಡೆದ ಗಿರೀಶ್ ಭಾರದ್ವಾಜ.ಇವರಿಗೂ ಇಲ್ಲಿ ಕೃಷಿ ಭೂಮಿ ಇದೆ ಹಾಗೂ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇವರ ಅಪ್ಪ ಇವರಲ್ಲರಿಗೂ ಮಾದರಿ. ಬ್ರಿಟಿಷ್ ರ ಆಡಳಿತದಲ್ಲಿ ಆಂಧ್ರ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದವರು ಇವರು.ಅನಿವಾರ್ಯ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ ಪೂರ್ವ 1930-31 ರಲ್ಲಿ ಮಂಗಳೂರಿಗೆ ಆಗಮಿಸಿದ ಇವರು ಪಾವಂಜೆ ಅಣೆಕಟ್ಟು, ಕೂಳೂರು ಸೇತುವೆ, ಮೋಹಿನಿ ವಿಲಾಸ ಹೋಟೆಲ್, ಧರ್ಮಸ್ಥಳದ ಮಂಜಯ್ಯ ಹೆಗಡೆ ಯವರ ಬೀಡಿನ ಕೆಳ ಅಂತಸ್ತು, ಹೊಳೆ ಮಧ್ಯೆ ಇರುವ ಕಟೀಲು ದೇವ ಸ್ಥಾನದ ಅಡಿ ಅಂತಸ್ತು ಯೋಜನೆ ವಿನ್ಯಾಸ ರೂಪಿಸಿದ ಬಿ.ಕೆ. ಭಟ್ಟ ಅವರು ನಂತರ ಉತ್ತಮ ಕೃಷಿಕ ರಾದರು.ಮಕ್ಕಳಲ್ಲೂ ಕೃಷಿಯ ಬಗ್ಗೆ ಪ್ರೀತಿ ಬೆಳೆಸಿದರು.ಎಲ್ಲ ವೃತ್ತಿಗಿಂತಲೂ ಕೃಷಿ ಕೊಡುವ ಖುಷಿಯನ್ನು ಅರಿಯುವ ಬಗ್ಗೆ ಮಾರ್ಗದರ್ಶನ ನೀಡಿದರು.ಅವರ 15 ಜನ ಮಕ್ಕಳಲ್ಲಿ 12 ಗಂಡು ಮಕ್ಕಳು. ಅವರಲ್ಲಿ ಗಿರೀಶ್ ಭಾರದ್ವಾಜ ಅವರು ಅಪ್ಪನಂತೆ ಇಂಜಿನಿಯರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಉಳಿದವರೆಲ್ಲರೂ ಕೃಷಿ ಋಷಿಗಳು. ಇಲ್ಲಿ ಅವರಿಗೆ ಕೃಷಿ ಮಾಡಲು ನೀರಿನ ತೊಂದರೆ ಇಲ್ಲ; ಆದರೆ ಇತ್ತೀಚೆಗೆ ಕೃಷಿ ಮಾಡಲು ಜನರೇ ದೊರೆಯದಂತಹ ಪರಿಸ್ಥಿತಿ. ಹಾಗಾಗಿ ಕೃಷಿ ಇಲಾಖೆ ಯಿಂದ ಮಾಹಿತಿ ಪಡೆದು ಕಟಾವು ಸೇರಿದಂತೆ ವಿವಿಧ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಲು ಆರಂಭಿಸಿದರಾದರೂ ಸಾವಯವ ಕೃಷಿ ಪದ್ಧತಿಯನ್ನು ಮುಂದುವರಿಸಿದ್ದೇವೆ ಎನ್ನುತ್ತಾರೆ ರವಿಶಂಕರ್ ಭಾರದ್ವಾಜ. ಹೂಮಲೆಯ ಬುಡದಲ್ಲಿ ಪ್ರಕೃತಿಸಹ್ಯ ಕೃಷಿ ನಡೆಸುತ್ತಿರುವ ಈ ಸಹೋದರರು ತಮಗೆ ಅಗತ್ಯವಿರುವ ಎಲ್ಲ ದವಸ ಧಾನ್ಯಗಳನ್ನು ಅವರ ಕೃಷಿ ಭೂಮಿಯಲ್ಲೇ ಬೆಳೆಯುತ್ತಾರೆ.ಹುಲ್ಲು ತೆಗೆಯಲು ಜನ ಸಿಗುತ್ತಿಲ್ಲ ಹಾಗಾಗಿ ಹಸುಗಳೇ ಹುಲ್ಲು ತೆಗೆಯುವ ಹಾಗೆ ಹುಲ್ಲು ಬೆಳೆದೆಡೆಗಳಲ್ಲಿ ಅವುಗಳನ್ನು ಮೇಯಲು ಬಿಡುತ್ತೇವೆ; ಶ್ರೀ ಪದ್ಧತಿ ಬೆಳೆಯಲ್ಲಿ ಕಳೆ ಜಾಸ್ತಿ, ಅದು ನಮ್ಮ ಪ್ರದೇಶಕ್ಕೆ ಒಗ್ಗದು ಎನ್ನುವ ಇವರು ಸಾಮಾನ್ಯ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

ಕೃಷಿ ಕಾರ್ಮಿಕರ ಕೊರತೆ ಯಿಂದಾಗಿ ಕಟಾವಿಗೆ, ಉಳುಮೆಗೆ, ಕಳೆ ತೆಗೆಯಲು ಯಂತ್ರಗಳ ಮೊರೆ ಹೋಗಿದ್ದಾರೆ. ಪವರ್ ಟಿಲ್ಲರ್, ರೀಪರ್, ಮಿನಿಟ್ರ್ಯಾಕ್ಟರ್, ವಿನ್ನೋವರ್ (ಗಾಳಿಯಂತ್ರ), ಪವರ್ ವೀಡ್, ಕೋನೋ ವೀಡರ್ ಗಳ ಸಹಾಯದಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.ಸಿವಿಲ್ ಇಂಜಿನಿಯರ್ ಸಹೋದರನ ಮಾರ್ಗ ದರ್ಶನದಲ್ಲಿ ಭತ್ತ ಸಂಗ್ರಹಿಸಲು, ತಲೆಹೊರೆ ಕಷ್ಟ ಕಡಿಮೆ ಮಾಡಿ ನೇರವಾಗಿ ಭತ್ತವನ್ನು ಮನೆಗೆ ತಂದು ಹಾಕಲು, ಚರ್ತು ಭುಜಾಕಾರ ಹಾಗೂ ನಾಲ್ಕು ಬಾಗಿಲಿರುವ ಮಗುಚಿ ಹಾಕಿದ ತೆಂಗಿನ ಸಿಪ್ಪೆ ಮಾದರಿಯ ಸಣ್ಣ ಕಟ್ಟಡ ನಿರ್ಮಿಸಿದ್ದು ಟ್ರ್ಯಾಕ್ಟರ್ ನೇರವಾಗಿ ಇದರೊಳಗೆ ತಂದು ಭತ್ತ ರಾಶಿ ಹಾಕುವು ದಲ್ಲದೆ ಬೈಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ. ಆದರೆ ಈ ಆವಿಷ್ಕಾರದಲ್ಲಿ ಭತ್ತ ಸೂಡಿ ಕಟ್ಟಲು ಆಗುವುದಿಲ್ಲ ಎಂಬ ಅನಾನುಕೂಲ ಹೊರತು ಪಡಿಸಿದರೆ ಉಳಿದಂತೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ಭತ್ತದ ಕೃಷಿಯೊಂದಿಗೆ ಅಡಿಕೆ, ತೆಂಗು,ಬಾಳೆ, ನೇಂದ್ರಬಾಳೆ, ಕಾಳು ಮೆಣಸು, ಹಣ್ಣಿನ ಗಿಡಗಳು, ಹೂಗಿಡಗಳನ್ನು ಬೆಳೆಸಿರುವ ಸಹೋದರರು ತಮ್ಮೆಲ್ಲ ಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿ ಕೊಂಡಿದ್ದಾರೆ. ವಿದ್ಯಾರ್ಜನೆ ಕೃಷಿಯಿಂದ ನಮ್ಮನ್ನು ದೂರ ಸರಿಸದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು, ನೂತನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದೆ ಎನ್ನುತ್ತಾರೆ. ಇವರಲ್ಲಿ ವಿಶ್ವೇಶ್ವ ಭಾರದ್ವಾಜ ಅವರಿಗೆ 2004 ರಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ರಾಜ್ಯೋತ್ಸವದಂದು ಲಭಿಸಿದೆ. ಸುಳ್ಯದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಅವರ ಸಹಕಾರವನ್ನು ರವಿಶಂಕರ್ ಸ್ಮರಿಸುತ್ತಾರೆ.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರಂಬೂರಿದೆ. ಇಲ್ಲಿಂದ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಸಾಗಿದರೆ ಇಡ್ಯಡ್ಕ ಇಲ್ಲೆ ಈ ಕೃಷಿ ಋಷಿಗಳ ವಾಸ.