Friday, July 9, 2010

ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಶಿಫಾರಸ್ಸು:ಎ. ಎಸ್. ಆನಂದ್

ಮಂಗಳೂರು,ಜು.9: ಕೈಗಾರಿಕೆಗೊಂದು ನೀತಿ, ಕೃಷಿಕರಿಗೊಂದು ನೀತಿ ಸಲ್ಲದು. ಕೃಷಿಕರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕೆಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ. ಎಸ್. ಆನಂದ್ ಅವರು ಹೇಳಿದರು.
ಅವರಿಂದು ಮಂಗಳೂರಿನಲ್ಲಿ ಉಪವಾಸ ನಿರತ ಕೃಷಿಕ ಗ್ರೆಗರಿ ಪತ್ರಾವೋ ಅವರನ್ನು ಭೇಟಿ ಮಾಡಿದ ಬಳಿಕ, ಜಿಲ್ಲಾಡಳಿತ ದೊಂದಿಗೆ ಈ ಬಗ್ಗೆ ಚರ್ಚಿಸಿದರು. ನಂತರ ಪತ್ರಿಕಾ ಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು ಎಲ್ಲ ಕೃಷಿಕರ ಹಿತವನ್ನು ಗಮನದಲ್ಲಿರಿಸಿ ಕೈಗಾರೀ ಕೀಕರಣಕ್ಕೆ ಸರ್ಕಾರ ಭೂಮಿಯನ್ನು ಒತ್ತುವರಿ ಮಾಡುವ ರೀತಿಯಲ್ಲೇ ಕೃಷಿಕರಿಗೂ ಭೂಮಿ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದ ಅವರು, ಉಪವಾಸ ನಿರತ ಕೃಷಿಕರ ನಿರಶನ ಅಂತ್ಯ ಹಾಗೂ ಕೃಷಿ ಭೂಮಿ ಸಂರಕ್ಷಣೆಯ ಬಗ್ಗೆ ನಾಳೆಯೇ ರಾಜ್ಯದ ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ಪರಿಹಾರ ಕಂಡು ಹುಡುಕುವುದಾಗಿ ಹೇಳಿದರು.ಕೃಷಿಕರ ಸಮ್ಮತಿಯಿಲ್ಲದೆ ಭೂಮಿ ಒತ್ತುವರಿ ಮಾಡುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾವಯವ ಕೃಷಿಕರು ಉಪಸ್ಥಿತರಿದ್ದರು.