Thursday, May 3, 2012

ನಿಯಮಪಾಲಿಸಲು ಸಹಕರಿಸದಿದ್ದರೆ ಕಠಿಣ ಕ್ರಮ: ಡಾ ಹರೀಶ್ ಕುಮಾರ್

ಮಂಗಳೂರು. ಮೇ.03 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ ಮ್ಯಾನ್ ಹೋಲ್ ಗಳಿಗೆ ಖಾಸಗಿ ವ್ಯಕ್ತಿಗಳು ಕಾರ್ಮಿಕರನ್ನು ಇಳಿಸಿ ಮ್ಯಾನುವಲ್ ಸ್ಕಾವೆಂಜಿಂಗ್ ಪ್ರೊಹಿಬಿಷನ್ ಆಕ್ಟನ್ನು ನೇರ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಪತ್ರಿಕೆಗಳಲ್ಲಿ ಸಚಿತ್ರ ವರದಿಯಾಗುತ್ತಿದ್ದು, ಇಂತಹ ಎಲ್ಲ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಯ್ದೆಯಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾ ಡಾ ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆಗೆ ಸೇರಿದ ಮ್ಯಾನ್ ಹೋಲ್ ಗಳಲ್ಲಿ ಖಾಸಗಿ ವ್ಯಕ್ತಿಗಳು ಕಾಮಗಾರಿ ನಡೆಸುವುದು ನಿಯಮ ಬಾಹಿರವಾಗಿದ್ದು, ಮಾನವರಿಂದ ಶುಚಿತ್ವಗೊಳಿಸುವುದು ಕಾಯಿದೆ ವಿರೋಧಿಯಾಗಿರುತ್ತದೆ. ಪಾಲಿಕೆ ಯಂತ್ರ ಬಳಸಿ ಮ್ಯಾನ್ ಹೋಲ್ ಶುಚಿಗೊಳಿಸುತ್ತಿದ್ದು, ಪಾಲಿಕೆಗೆ ದೂರು ನೀಡಿದ್ದಲ್ಲಿ ತುರ್ತು ಕ್ರಮ ಜರುಗಿಸಲಾಗುತ್ತಿದೆ. ಬದಲಾಗಿ ಖಾಸಗಿ ವ್ಯಕ್ತಿಗಳಿಗೆ ಮಾನವರನ್ನು ಬಳಸಿ ಗುಂಡಿ ಶುಚೀಕರಣಕ್ಕೆ ಪ್ರಯತ್ನಿಸಿದ್ದಲ್ಲಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪಾಲಿಕೆ ವತಿಯಿಂದ ಸಂಬಂಧಿತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿರ್ದಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನಿಯಮಗಳನ್ನು ಪಾಲಿಸಲು ಪಾಲಿಕೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನಾಪ ಆಯುಕ್ತರು ಹೇಳಿದ್ದಾರೆ.