Saturday, May 19, 2012

ಸಂಸದರ ನಿಧಿಯಿಂದ ಅನುದಾನ ಬಿಡುಗಡೆ

ಮಂಗಳೂರು, ಮೇ.19 :ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ  ನಳಿನ್ ಕುಮಾರ್ ಕಟೀಲ್ ಅವರ 2010-11 ಮತ್ತು 2011-12 ನೇ ಸಾಲಿನಲ್ಲಿ ಮಂಗಳೂರು ತಾಲೂಕಿನ 9 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.27.00 ಲಕ್ಷ ರೂಪಾಯಿಗಳಲ್ಲಿ ರೂ.20.24  ಲಕ್ಷಗಳ ಚೆಕ್ ಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ ಅನುಷ್ಠಾನಗೊಳಿಸಲು ಬಿಡುಗಡೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ
  ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕು 2010-11  ನೇ ಸಾಲಿನ ತಲಪಾಡಿ ದೇವಿಪುರ ರಸ್ತೆಯ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.50 ಲಕ್ಷಗಳಲ್ಲಿ ರೂ.3.37ಲಕ್ಷದ ಚೆಕ್ನ್ನು ,ಕಿನ್ಯಾ ಗ್ರಾಮದ ಪೆರ್ಮಂದೂರು-ಸಾಂತ್ಯ ರಸ್ತೆ ರಚನೆಗೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷದ ಚೆಕ್ನ್ನು ಹಾಗೂ 2011-12 ನೇ ಸಾಲಿನ ತಿರುವೈಲು ವಾರ್ಡಿನ ಕಲರೈ ಕೋಡಿ ರಸ್ತಯ ಡಾಮರೀಕರಣಕ್ಕೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷಗಳ ಚೆಕ್,ಇಡ್ಯಾ ಪೂರ್ವ ವಾರ್ಡಿನ ಶೇಖರ ಶೆಟ್ಟಿ ಮನೆಯಿಂದ ಪುಷ್ಪ ಪೂಜಾರಿಯವರ ಮನೆವರೆಗೆ ಇಂಟರ್ ಲಾಕ್ ಅಳವಡಿಕೆ ಮತ್ತು ಚರಂಡಿ ನಿರ್ಮಾಣಕ್ಕೆ ಮಂಜೂರಾಗಿರುವ ರೂ.2.00ಲಕ್ಷಗಳಲ್ಲಿ ರೂ.1.50 ಲಕ್ಷದ ಚೆಕ್ನ್ನು ,ಕುಂಜತ್ತಬೈಲು ದೇವಿ ಭಜನಾ ಮಂದಿರದ ಎದುರುಗಡೆ ಮುಚ್ಚಿದ ಚರಂಡಿ ರಚನೆಗೆ ಮಂಜೂರಾಗಿರುವ ರೂ.2.00 ಲಕ್ಷಗಳಲ್ಲಿ ರೂ.1.50 ಲಕ್ಷದ ಚೆಕ್ನ್ನು ,ಕದ್ರಿ ಬಿ ವಾರ್ಡ್ ಭಟ್ರ ಕುಮೇರುವಿನಿಂದ ಗಂಧಕಾಡು ಮುಖ್ಯ ರಸ್ತೆ ಡಾಮರೀಕರಣಕ್ಕೆ ಮಂಜೂರಾಗಿರುವ ರೂ.1.50 ಲಕ್ಷದಲ್ಲಿ ರೂ.1.12 ಲಕ್ಷದ ಚೆಕ್ಕನ್ನು, ,ಉಳ್ಳಾಲ ಪುರಸಭಾ ವ್ಯಾಪ್ತಿ ಮಾರ್ಗತಲೆ ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.00 ಲಕ್ಷಗಳಲ್ಲಿ ರೂ.3.00 ಲಕ್ಷದ ಚೆಕ್ನ್ನು,ಉಳ್ಳಾಲದ ಕುತ್ತಾಯ ಸೇವಂತಿಗುತ್ತು ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.00 ಲಕ್ಷಗಳಲ್ಲಿ ರೂ.3.00 ಲಕ್ಷದ ಚೆಕ್ನ್ನುಮತ್ತು ಕೋಣಾಜೆ ಗ್ರಾಮದ ಅಣ್ಣರೆಪಾಲು ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷದ ಚೆಕ್ನ್ನು ಹೀಗೆ ಒಟ್ಟು 9 ಕಾಮಗಾರಿಗಳ ರೂ.20.24 ಲಕ್ಷದ ಚೆಕ್ಗಳನ್ನು  ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆ. 
  ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ  2011-12 ನೇ ಸಾಲಿನಲ್ಲಿ ಪುತ್ತೂರು ತಾಲೂಕಿನ 5 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.21.00 ಲಕ್ಷ ರೂಪಾಯಿಗಳಲ್ಲಿ ರೂ.15.75  ಲಕ್ಷಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಬಿಡುಗಡೆ ಮಾಡಲಾಗಿದೆ
                                    ಪುತ್ತೂರು ತಾಲೂಕಿಗೆ ಮಂಜೂರಾಗಿದ್ದ  ರೂ.21.00 ಲಕ್ಷ ರೂಪಾಯಿಗಳಲ್ಲಿ ಇದೀಗ ರೂ.15.75 ಲಕ್ಷಗಳನ್ನು ಬಿಡುಗಡೆ ಮಾಡಿ ಚೆಕ್ ಗಳನ್ನು ಕಾಮಗಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆ.
             ಬಂಟ್ವಾಳ ತಾಲೂಕಿನ 7 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.26.00 ಲಕ್ಷ ರೂಪಾಯಿಗಳಲ್ಲಿ ರೂ.19.50  ಲಕ್ಷಗಳ ಚೆಕ್ಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಬಿಡುಗಡೆ ಮಾಡಲಾಗಿದೆ.
ಬಂಟ್ವಾಳ ತಾಲೂಕಿಗೆ ಮಂಜೂರಾಗಿದ್ದ  ರೂ.26.00 ಲಕ್ಷ ರೂಪಾಯಿಗಳಲ್ಲಿ ಇದೀಗ ರೂ.19.50 ಲಕ್ಷಗಳನ್ನು ಬಿಡುಗಡೆ ಮಾಡಿ ಚೆಕ್ಗಳನ್ನು ಕಾಮಗಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆಯೆಂದು ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.