Wednesday, May 9, 2012

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಗ್ರಾಂ.ಪಂ.ಗಳಲ್ಲಿ 1.84 ಕೋ.ವೆಚ್ಚ

ಮಂಗಳೂರು,ಮೇ.09 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 203ಗ್ರಾಮಪಂಚಾಯತ್ ಗಳಲ್ಲಿ ಶೇಕಡಾ
25ರಅನುದಾನದಲ್ಲಿ 2011-12 ನೇ ಸಾಲಿನಲ್ಲಿ ಒಟ್ಟು 1,84,04,772 ರೂ.ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ವೆಚ್ಚ ಮಾಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಿಗೆ 2011-12 ನೇ ಸಾಲಿನಲ್ಲಿ ರೂ.1,70,03,831 ಗಳ ಜೊತೆಗೆ 2011 ರ ಉಳಿಕೆ ಹಣ ರೂ.41,94,715 ನ್ನು ಸಹ ಕಾದಿರಿಸಲಾಗಿತ್ತು.
ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ರೂ.88,81,692 ಗಳನ್ನು ವೆಚ್ಚ ಮಾಡಿದ್ದರೆ ಅತೀ ಕಡಿಮೆ ಸುಳ್ಯ ತಾಲೂಕಿನಲ್ಲಿ ರೂ.17,78,400 ಗಳನ್ನು ವೆಚ್ಚ ಮಾಡಲಾಗಿದೆ. ಉಳಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ 27,65,247 ,ಪುತ್ತೂರು ತಾಲೂಕಿನಲ್ಲಿ 25,79,530 ಹಾಗೂ ಬಂಟ್ವಾಳ ತಾಲೂಕಿನಲ್ಲಿ 23,99,894ರೂ.ಗಳನ್ನು ವೆಚ್ಚ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಯೋಜನೆಯ ಅನ್ವಯ ಶೇಕಡಾ 87 ರಷ್ಟು ಸಾಧನೆ ಮಾಡಲಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ವರದಿಯಲ್ಲಿ ತಿಳಿಸಿದೆ.