Thursday, May 31, 2012

ಕೃಷಿ ಪ್ರಶಸ್ತಿ ವಿಜೇತರು

ಮಂಗಳೂರು,ಮೇ. 31: ಮುಂಗಾರು 2011-12ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಬೆಳೆ ಪ್ರಶಸ್ತಿ ವಿಜೇತರು- ಮಂಗಳೂರಿನ  ಸೀತಾರಾಮ ಶೆಟ್ಟಿ ಬಿನ್ ಮುದ್ದಣ್ಣ ಶೆಟ್ಟಿ ಪಾಲಡ್ಕ ಗ್ರಾಮ,ಸುಳ್ಯದ ಶ್ರೀಮತಿ ಗಂಗಮ್ಮ ಕೋಂ ರಾಮಣ್ಣ ನಾಯ್ಕ್ ಆಲಟ್ಟಿ ಗ್ರಾಮ, ಬೆಳ್ತಂಗಡಿಯ  ಕುಮಾರ ರಾಜಬಂಗ ಕೊರಗ ಪೆರ್ಗಡೆ ಕಳಂಜ ಗ್ರಾಮ. ಕ್ರಮವಾಗಿ  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ತಾಲೂಕು ಮಟ್ಟದ ಬೆಳೆ ಪ್ರಶಸ್ತಿ ವಿಜೇತರು-ಮಂಗಳೂರಿನ  ರಾಮ ಸುವರ್ಣ ಬಿನ್ ಶಿವ ಪೂಜಾರಿ, ನಿಡ್ಡೋಡಿ ಗ್ರಾಮ, ಚಂದ್ರಶೇಖರ ಶೆಟ್ಟಿ ಬಿನ್ ಕುಂಞಣ್ಣ ಶೆಟ್ಟಿ ತಲಪಾಡಿ ಗ್ರಾಮ, ಹಮೀದ್ ಬಿನ್ ಬಿಪಾತುಮ್ಮ, ಎಳತ್ತೂರು ಗ್ರಾಮ. ಬಂಟ್ವಾಳ ತಾಲೂಕಿನ ಪುರುಷೋತ್ತಮ ಬಿ. ಬಿನ್ ಬಾಬು ಪೂಜಾರಿ ಮಣಿನಾಲ್ಕೂರು ಗ್ರಾಮ,  ಗುರುವಪ್ಪ ನಾಯ್ಕ್ ಬಿನ್ ತಾಡ ನಾಯ್ಕ, ಬುಡೋಳಿ ಗ್ರಾಮ,  ಶಂಕರ ಪ್ರಭು ಬಿನ್ ರಾಮಣ್ಣ ಪ್ರಭು-ಮಂಚಿ ಗ್ರಾಮ,
ಬೆಳ್ತಂಗಡಿ ತಾಲೂಕಿನಿಂದ ಅಂತಪ್ಪ ಬಿನ್ ಬಾಬು ಪೂಜಾರಿ ನಾವೂರು ಗ್ರಾಮ, ಶ್ರೀಮತಿ ಮಂಜುಳಾ ಬಿನ್ ಅಂತಪ್ಪ ಕಾಜವ, ಪುದುವೆಟ್ಟು ಗ್ರಾಮ, ರಾಮಚಂದ್ರಪ್ಪ ಬಿನ್ ಲಿಂಗಪ್ಪ ಪೂಜಾರಿ ಆರಂಬೋಡಿ ಗ್ರಾಮ. ಪುತ್ತೂರು ತಾಲೂಕಿನಿಂದ  ಮಧುಸೂದನ ಮಾವಜಿ ಬಿನ್ ನಾರಾಯಣ ಗೌಡ, ಪಡುವನ್ನೂರು ಗ್ರಾಮ, ನಾಗಪ್ಪ ಗೌಡ ಬಿನ್ ಸಾಂತಪ್ಪ ಗೌಡ ಕೂಳ್ತಿಗೆ ಗ್ರಾಮ, ಶ್ರೀಮತಿ ದುಗ್ಗಮ್ಮ ಕೋಂ ಬಾಬು ಶೆಟ್ಟ, ಪಡುವನ್ನೂರು ಗ್ರಾಮ. ಸುಳ್ಯ ತಾಲೂಕಿನಿಂದ ಎ ಕರುಣಾಕರ ಬಿನ್ ಆನಂದ ಗೌಡ ಹುದೇರಿ, ಮುರುಳ್ಯ ಗ್ರಾಮ,  ಮಹೇಶ್ ಬಿನ್ ಮೋನಪ್ಪ ಗೌಡ, ಆರಂಬೂರು ಗ್ರಾಮ, ಜನಾರ್ಧನ್ ಬಿನ್ ನಾಗಪ್ಪ ಗೌಡ ಕಿರ್ಲಾಯ, ಆರಂತೋಡು ಗ್ರಾಮ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ಪ್ರಶಸ್ತಿ ಸಮಿತಿ ದಿನಾಂಕ 28-5-2012ರಂದು ಕೃಷಿ ಪ್ರಶಸ್ತಿ ಪಟ್ಟಿ ಪ್ರಕಟಿಸಿತು.  ಎಸ್. ಡಿ ಸಂಪತ್ ಸಾಮ್ರಾಜ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಜಂಟಿ ನಿರ್ದೇಶಕರು ಎಲ್ಲರನ್ನೂ ಸ್ವಾಗತಿಸಿ, ಸರ್ಕಾರಿ ಆದೇಶದನ್ವಯ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಿಗದಿತ ಶುಲ್ಕ ಭರಿಸಿ ಬೆಳೆ ಸ್ಪರ್ಧೇಯಲ್ಲಿ ಭಾಗವಹಿಸಿದ ರೈತರ ಬೆಳೆಯನ್ನು ಮಾರ್ಗಸೂಚಿಯನ್ವಯ ಕಟಾವು ನಡೆಸಿ ಇಳುವರಿ ವರದಿ ತಯಾರಿಸಲಾಗಿದೆ ಎಂದು ಜಂಟಿ ಕೃಷಿನಿರ್ದೆಶಕರಾದ  ಪದ್ಮಯ್ಯ ನಾಯಕ್ ಅವರು ವಿವರಿಸಿದರು.
ಜಿಲ್ಲಾಮಟ್ಟದ ಪ್ರಶಸ್ತಿಗೆ ಐದು ತಾಲೂಕುಗಳಿಂದ 20 ರೈತರು ಭಾಗವಹಿಸಿದ್ದರು. ತಾಲೂಕು ಮಟ್ಟದಿಂದ 74 ರೈತರು ಪಾಲ್ಗೊಂಡಿದ್ದರು.