Saturday, May 19, 2012

ದ.ಕ. ಜಿಲ್ಲೆ: 74 ಕ್ವಿಂಟಾಲ್ ಬೀಜ ವಿತರಣೆ

ಮಂಗಳೂರು,ಮೇ.19: ಮುಂಗಾರು ಹಂಗಾಮಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೆಳೆ ಭತ್ತ; ಪ್ರಸಕ್ತ ಸಾಲಿನ ಆರಂಭದಲ್ಲಿ 74 ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು, 332.25 ಕ್ವಿಂಟಾಲ್ ಬೀಜ ದಾಸ್ತಾನಿದೆ ಎಂದು ಕೃಷಿ ಜಂಟಿ ನಿರ್ದೇಶಕರಾದ ಎ. ಪದ್ಮಯ್ಯ ನಾಯ್ಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 189 ಫಲಾನುಭವಿಗಳಿದ್ದು, ಮಂಗಳೂರು ತಾಲೂಕಿನಿಂದ 117 ಫಲಾನುಭವಿಗಳು, ಬಂಟ್ವಾಳದಿಂದ 29, ಬೆಳ್ತಂಗಡಿಯಿಂದ 18, ಪುತ್ತೂರಿನಿಂದ 24, ಸುಳ್ಯದಿಂದ ಒಬ್ಬರು ಫಲಾನುಭವಿಗಳಿಗೆ ಬೀಜ ವಿತರಣೆಯಾಗಿದೆ. 33,500 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಕಳೆದ ಸಾಲಿನಲ್ಲಿ 32,423 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿತ್ತು. ಕ್ವಿಂಟಾಲ್ ಗೆ 950 ರೂ.ಗಳಂತೆ 70,300 ರೂ. ಸಬ್ಸಿಡಿಯನ್ನು ರೈತರಿಗೆ ನೀಡಲಾಗಿದೆ. ಮಂಗಳೂರು ತಾಲೂಕಿನಲ್ಲಿ 51.75, ಬಂಟ್ವಾಳದಲ್ಲಿ 9.25, ಬೆಳ್ತಂಗಡಿಯಲ್ಲಿ 5.75, ಪುತ್ತೂರಿನಲ್ಲಿ 7, ಸುಳ್ಯದಲ್ಲಿ 0.25 ಕ್ವಿಂಟಾಲ್ ಬೀಜವನ್ನು ವಿತರಿಸಲಾಗಿದೆ.