Monday, May 30, 2011

ಗಡಿನಾಡ ಉತ್ಸವಗಳು ಅಲ್ಲಿನ ಅಭಿವೃದ್ಧಿಗೆ ಪೂರಕವಾಗಲಿ: ಕೃಷ್ಣ ಪಾಲೆಮಾರ್

ಮಂಗಳೂರು,ಮೇ.29:ಸಾಂಸ್ಕೃತಿಕ, ಪ್ರಾಕೃತಿಕ ಹಾಗೂ ಭೌಗೋಳಿಕವಾಗಿ ಸಂಪದ್ಭರಿತವಾಗಿರುವ ಸುಳ್ಯದ ಗಡಿಯಲ್ಲಿರುವ ಮಂಡೆಕೋಲಿನಲ್ಲಿ ರಸ್ತೆ ಮತ್ತು ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಂದು ಪ್ರಜೆಗೆ, ಪರಿಸರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವನ್ನಿರಿಸಿ ವಿವಿಧ ಪ್ರಾಧಿಕಾರಗಳನ್ನು ರಚಿಸಿದೆ. ಬೆಲದ್ ಅವರ ಅಧ್ಯಕ್ಷತೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಹೇಳಿದರು.ಅವರು ಸುಳ್ಯದ ಮಂಡೆ ಕೋಲಿ ನಲ್ಲಿ ಆಯೋ ಜಿಸ ಲಾಗಿದ್ದ ವಿದ್ವತ್ ಪೂರ್ಣ ವಾದ ಎರಡು ದಿನಗಳ ಗಡಿ ಉತ್ಸವದ ಸಮಾ ರೋಪ ಸಮಾ ರಂಭ ವನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು. ಸರ್ಕಾರ ಬಜೆಟ್ ನಲ್ಲಿ 15 ಕೋಟಿ ರೂ.ಗಳನ್ನು ಮೀಸ ಲಿರಿ ಸಿದ್ದು, ಎಲ್ಲರೂ ಸೇರಿ ಈ ಮೊತ್ತ ವನ್ನು ನೂರು ಕೋಟಿಗೆ ಏರಿಸು ವಂತೆ ಮುಖ್ಯ ಮಂತ್ರಿ ಗಳಲ್ಲಿ ಮನವಿ ಮಾಡುವ ಎಂದು ಪಾಲೆಮಾರ್ ಹೇಳಿದರು. ಗಡಿ ಪ್ರದೇಶ ಗಳಲ್ಲಿರುವ ಕನ್ನಡದ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು. ರಾಜ್ಯ ಸರ್ಕಾರ ಸದುದ್ದೇಶದಿಂದ ರಚಿಸಿರುವ ಪ್ರಾಧಿಕಾರ, ಅಕಾಡೆಮಿಗಳು ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ನಮ್ಮ ಸಂಸ್ಕೃತಿ, ಭಾಷೆಯ ಅಭಿವೃದ್ಧಿಗೆ ವೇಗೋತ್ಕರ್ಷಗಳಂತೆ ಕೆಲಸಮಾಡುತ್ತಿದೆ ಎಂದರು.ಸಮಾ ರೋಪ ಸಮಾ ರಂಭದಲ್ಲಿ ಮಾತನಾಡಿದ ಸುಳ್ಯ ಶಾಸಕರಾದ ಅಂಗಾರ ಅವರು, ರಾಷ್ಟ್ರೀಯ ಪರಿಕಲ್ಪನೆ, ಸಾಮ ರಸ್ಯದಡಿ ಹಲವು ಸಂದರ್ಭ ಗಳಲ್ಲಿ ಕೆಲ ವರಿಗೆ ಅನ್ಯಾಯ ವಾದಾಗ ಅಂತ ಹವರ ಸಮಸ್ಯೆ ಗಳಿಗೆ ಸ್ಪಂದಿ ಸಲು ವಿವಿಧ ಪ್ರಾಧಿ ಕಾರ ಗಳನ್ನು ಸರ್ಕಾರ ರಚಿ ಸಿದ್ದು, ತಮ್ಮ ಕಾರ್ಯಾ ವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನು ಸಭೆಗೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ್ ಬೆಲದ್ ಅವರು ಮಾತನಾಡಿ,ಪ್ರಾಧಿ ಕಾರದ ಕಾರ್ಯ ವ್ಯಾಪ್ತಿ, ಆದ್ಯತೆ ಗಳನ್ನು ವಿವ ರಿಸಿ ದರು. ಗಡಿ ಉತ್ಸವ ಹಾಗೂ ಪ್ರಾಧಿ ಕಾರ ಉಳಿದ ವುಗ ಳಿಗಿಂತ ಭಿನ್ನ ವಾಗಿದ್ದು, 5 ಗಡಿ ಪ್ರದೇಶ ಗಳ 52 ತಾಲೂಕು ಗಳನ್ನು ತಾನು ಸಂದರ್ಶಿ ಸಿದ್ದು, ಚಾಮ ರಾಜ ನಗರ ದ ಹನೂರಿನ ಉತ್ಸ ವದ ಬಳಿಕ ಆಯೋ ಜಿಸಿದ ಮಂಡೆ ಕೋಲು ಉತ್ಸವ ವಿದ್ವತ್ ಪೂರ್ಣ ವಾಗಿ ಸಮಾಪ್ತಿ ಗೊಂಡ ಬಗ್ಗೆ ಹೆಮ್ಮೆ ಯನ್ನು ವ್ಯಕ್ತ ಪಡಿ ಸಿದರು. ಗಡಿ ಪ್ರದೇಶದ ನಾಲ್ಕು ಶಾಸಕರೊಂದಿಗೆ ಗಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸುವ ಉದ್ದೇಶದಿಂದ ಗಡಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈಗಾಗಲೇ ಪ್ರಾಧಿಕಾರಕ್ಕೆ ನೀಡಲಾಗಿರುವ 15 ಕೋಟಿ ರೂ.ಗಳಲ್ಲಿ ಗಡಿಯಂಚಿನ ಪ್ರದೇಶಗಳಲ್ಲಿರುವ ಶಾಲೆಗಳ ಶಿಕ್ಷಣಕ್ಕೆ, ಶಿಕ್ಷಕರಿಗೆ ವಸತಿಗೃಹಕ್ಕೆ, ಗ್ರಂಥಾಲಯ ಸ್ಥಾಪನೆಗೆ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ನವೀನ್ ಕುಮರ್ ರೈ ಮೇನಾಲ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಗುಣಾವತಿ ಕೊಲ್ಲಂತ್ತಡ್ಕ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮೋಹನ ನಾಗಮ್ಮನವರ್, ಪುತ್ತೂರು ಸಹಾಯಕ ಕಮಿಷನರ್ ಡಾ. ಹರೀಶ್ ಕುಮಾರ್, ತಹಸೀಲ್ದಾರ್ ವೈದ್ಯನಾಥ್ ಉಪಸ್ಥಿತರಿದ್ದರು.
ಸಮಾರೋಪಕ್ಕೆ ಮೊದಲು ನಡೆದ ವಿಚಾರಗೋಷ್ಠಿ 'ಗಡಿ ಅಭಿವೃದ್ಧಿ ನುಡಿ' ಯಲ್ಲಿ ಬಂಟ್ವಾಳ ಶಾಸಕರಾದ ಬಿ. ರಮಾನಾಥ ರೈ, ಶಾಸಕ ಎಸ್ ಅಂಗಾರ ಅವರು ತಮ್ಮ ಕ್ಷೇತ್ರದ ಗಡಿ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅಪ ರಾಹ್ನ ಎರಡು ಗಂಟೆಗೆ ಆರಂಭ ವಾದ ಗಾನ ಕುಂಚ ಕಾರ್ಯ ಕ್ರಮ ದಲ್ಲಿ ಕೆ. ಆರ್. ಗೋಪಾಲ ಕೃಷ್ಣ ಅವರ ಭಾವನಾ ಬಳಗ ಸುಳ್ಯ ಇವ ರಿಂದ ಗಾನ ಹಾಗೂ ಪ್ರಸನ್ನ ಐವ ರ್ನಾಡು, ಶ್ರೀಹರಿ ಪೈಂದೋ ಡಿ, ಧನಂ ಜನ ಮ ರ್ಕಂಜ, ಚಂದ್ರಾ ಅಡ್ಕಾರ್, ಸತೀ ಶ್ ಪಂಜ, ಭಾಸ್ಕರ ನೆಲ್ಯಾಡಿ ಇವರು ಗಳು ಒಂದು ಗಾನಕ್ಕೆ ಆರು ಜನ ಕಲಾವಿದರಿಂದ ಕುಂಚ (ಚಿತ್ರ ಬಿಡಿಸುವಿಕೆ) ವಿನೂತನ ಪ್ರಯೋಗವಾಗಿತ್ತು.