Monday, May 30, 2011

ಮಂಗಳೂರು-ಬೆಂಗಳೂರು 10 ಕೆಎಸ್ ಆರ್ ಟಿಸಿ ಸ್ಲೀಪರ್ ಕೋಚ್ ಬಸ್:ಯೋಗಿಶ್ ಭಟ್

ಮಂಗಳೂರು,ಮೇ.30:ಮಂಗಳೂರಿನಿಂದ ಬೆಂಗಳೂರಿಗೆ ಶೀಘ್ರವೇ ಸ್ಲೀಪರ್ ಕೋಚ್ ಬಸ್ಸುಗಳ ಸೇವೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಲಿದೆ ಎಂದು ರಾಜ್ಯ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದ್ದಾರೆ.
ಅವರು ಇಂದು ಮಂಗ ಳೂರಿನ ಬಿಜೈ ಕೆ.ಎಸ್. ಆರ್. ಟಿ.ಸಿ ಬಸ್ಸು ನಿಲ್ದಾಣ ದಲ್ಲಿ ಸರ್ಕಾ ರದ ನೆರವಿ ನೊಂದಿಗೆ ನಡೆ ಯುತ್ತಿ ರುವ ಯಾತ್ರಿ ನಿವಾಸ,ಮೂಲ ಭೂತ ಸೌಕರ್ಯ ಗಳ ಕಾಮ ಗಾರಿ ಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.ಮೊದಲ ಹಂತ ವಾಗಿ 10 ಬಸ್ಸು ಗಳು ಈ ಸೇವೆಗೆ ಲಭ್ಯ ವಾಗ ಲಿದ್ದು,ಇವು ಗಳಲ್ಲಿ 6 ಬಸ್ ಮಂಗ ಳೂರಿ ನಿಂದ ಮತ್ತು 4 ಬಸ್ ಕುಂದಾ ಪುರ ದಿಂದ ಸೇವೆಯನ್ನು ಆರಂಭಿಸಲಿವೆ ಎಂದರು.ಮಂಗಳೂರು ಕೆಸ್.ಆರ್,ಟಿ.ಸಿ. ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು,ಈಗಾಗಲೇ ಸರ್ಕಾರ 3 ಕೋಟಿ.ರೂ.ಗಳನ್ನು ನೀಡಿದೆ.ಕಾಮಾಗಾರಿ ಪೂರ್ಣಗೊಳಿಸಲು ಇನ್ನೂ 25 ಲಕ್ಷ ರೂ.ಗಳ ಅಗತ್ಯವಿದ್ದು,ಕೂಡಲೇ ಈ ಹಣ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಲ್ಲಿ ವಿನಂತಿ ಮಾಡಲಾಗಿದೆ ಎಂದರು.ನಗರದ ಬೆಂದೂರು ವೆಲ್ ನಲ್ಲಿರುವ ಸಂಸ್ಥೆಯ 1.06 ಎಕರೆ ಜಾಗದಲ್ಲಿ ಖಾಸಾಗಿ ಸಹ ಭಾಗಿತ್ವದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.ಸಾರ್ವಜನಿಕರ ದೂರುಗಳು ಬಂದರೆ ಆ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕರುಂಬಯ್ಯ ಉಪಸ್ಥಿತರಿದ್ದರು.