Saturday, May 28, 2011

ಪ್ರವಾಸೋದ್ಯಮಕ್ಕೆ ದಕ್ಷಿಣ ಕನ್ನಡ ಮಾದರಿಯಾಗಲಿ: ಯೋಗೀಶ್ ಭಟ್

ಮಂಗಳೂರು,ಮೇ.28:ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ್ದು, ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಅವರು ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಪ್ರವಾ ಸೋದ್ಯಮ ಇಲಾಖೆ, ಜಿಲ್ಲಾ ಡಳಿತ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಜನತಾ ಬಜಾರ್ ಶಾಖೆ ಸಂಯುಕ್ತ ಆಶ್ರಯ ದಲ್ಲಿ ಆಯೋಜಿ ಸಲಾದ ಪ್ರವಾಸಿ ಟ್ಯಾಕ್ಸಿ ವಿತ ರಣಾ ಸಮಾ ರಂಭ ದಲ್ಲಿ 21 ಪ್ರವಾಸಿ ಟ್ಯಾಕ್ಸಿ ಗಳನ್ನು ಕರ್ನಾ ಟಕ ಪ್ರವಾ ಸೋದ್ಯಮ ಇಲಾಖೆ ಯಿಂದ 2010-11ನೇ ಸಾಲಿನ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ವಿತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಂಗ ಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಪ್ರವಾ ಸೋದ್ಯಮ ಕೇಂದ್ರ ಗಳ ಅಭಿ ವೃದ್ಧಿ ಸಂಬಂ ಧಿಸಿದ ರೂಪು ರೇಷೆಗಳು ಅಂತಿಮ ಹಂತಕ್ಕೆ ತಲು ಪಿದ್ದು, ಅಂತಾ ರಾಷ್ಟ್ರೀಯ ಗೋಲ್ಫ್ ಕೋರ್ಸ್ ಮತ್ತು ರೋಪ್ ವೇ ಕಾಮಗಾರಿಗೂ ಅಂತಿಮ ರೂಪು ನೀಡ ಲಾಗುವುದು ಎಂದರು. ಸೋಮೇಶ್ವರ ಕಡಲ ತೀರವನ್ನು ಕನ್ಯಾಕುಮಾರಿಯಂತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಉಪಸಭಾಧ್ಯಕ್ಷರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಟಿ. ಶೈಲಜಾ ಭಟ್ ಅವರು ಮಾತನಾಡಿ, ಮಹಿಳಾ ಫಲಾನುಭವಿಗೂ ಕಾರು ನೀಡುವಂತೆ ಬ್ಯಾಂಕಿನವರಿಗೆ ಸೂಚಿಸಿದರಲ್ಲದೆ, ಫಲಾನುಭವಿಗಳಿಗೆ ಶುಭ ಹಾರೈಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಉತ್ತಮ ಯೋಜನೆಗಳನ್ನು ಆರಂಭದಲ್ಲಿಯೇ ಸಕರ್ಾರ ರೂಪಿಸಿದ್ದು ಇಂದು ಫಲ ನೀಡುತ್ತಿದೆ. ಈ ಯೋಜನೆಯಡಿ ಇದುವರೆಗೆ 40 ಕಾರುಗಳನ್ನು ನೀಡಲಾಗಿದೆ ಎಂದರು. ಶಾಸಕ ಂಯು ಟಿ ಖಾದರ್ ಅವರು ಫಲಾನುಭವಿಗಳಿಗೆ ಶುಭ ಹಾರೈಸಿದರು.ಪ್ರವಾ ಸೋದ್ಯಮ ಇಲಾಖೆ ದ. ಕ ಜಿಲ್ಲೆಯ ಅರ್ಹ ನಿರು ದ್ಯೋಗಿ ಪರಿ ಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಪಂಗ ಡದ ಅಭ್ಯರ್ಥಿ ಗಳಿಗೆ ಪ್ರವಾ ಸೋದ್ಯಮ ಕ್ಷೇತ್ರ ದಲ್ಲಿ ಉದ್ಯೋ ಗಾವ ಕಾಶ ಒದ ಗಿಸಿ ಅವ ರನ್ನು ಸ್ವಾವ ಲಂಬಿ ಗಳ ನ್ನಾಗಿಸುವ ಉದ್ದೇ ಶದಿಂದ ಕಳೆದ ಎರಡು ವರ್ಷ ಗಳಿಂದ ಟಾಟಾ ಇಂಡಿ ಕ್ಯಾಬ್ ಡಿ ಎಲ್ ಇ ಬಿ ಎಸ್ 3 ಪ್ರವಾಸಿ ಟ್ಯಾಕ್ಸಿ ಯನ್ನು ಶೇ. 50 ಸಹಾಯಧನ ಹಾಗೂ ಶೇ. 45 ಬ್ಯಾಂಕ್ ಸಾಲ ಸೌಲಭ್ಯ ಮತ್ತು ಶೇ. 5 ಫಲಾನುಭವಿ ಭರಿಸುವ ಮೂಲಕ ಖರೀದಿಸಿ ವಿತರಿಸಿದೆ. ಟ್ಯಾಕ್ಸಿ 3,59,339 ರೂ. ಮೌಲ್ಯದ್ದಾಗಿದೆ.
ಜಿಲ್ಲಾಧಿಕಾರಿ ಡಾ ಎನ್ ಎಚ್ ಚನ್ನಪ್ಪ ಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಆರ್. ಪ್ರಕಾಶ್ ಅವರು ಸ್ವಾಗತಿಸಿದರು. ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ವಂದಿಸಿದರು.