Wednesday, May 25, 2011

ವೇಣೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 5ಕೋ.-ಮುಖ್ಯಮಂತ್ರಿ ಯಡ್ಯೂರಪ್ಪ

ಮಂಗಳೂರು,ಮೇ.25:ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಜೊತೆಗೆ ಸುತ್ತಮುತ್ತಲ ಗ್ರಾಮದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಅಂದಾಜು ಪಟ್ಟಿ ಸಲ್ಲಿಸಿದರೆ ತಕ್ಷಣವೇ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಯೂರಪ್ಪ ಅವರು ಹೇಳಿದರು.
20 12 ರಲ್ಲಿ ವೇಣೂರಿ ನಲ್ಲಿ ಜರು ಗುವ ಬಾಹು ಬಲಿಯ ಮಹಾ ಮಸ್ತ ಕಾಭಿ ಷೇಕ್ಕೆ ಪೂರ್ವ ಭಾವಿ ಯಾಗಿ ಬಜೆಟ್ ನಲ್ಲಿ ಈಗಾ ಗಲೇ 2 ಕೋಟಿ ರೂ. ಗಳನ್ನು ಮೀಸ ಲಾಗಿ ರಿಸಿದ್ದು ಅಂ ದಾಜು ಪಟ್ಟಿ ನೀಡಿದ ತಕ್ಷಣ ವೇ ಬೇಕಾದ ಹಣ ವನ್ನು ಬಿಡು ಗಡೆ ಮಾಡು ವುದಾಗಿ ರಾಜ್ಯ ಸರ್ಕಾ ರದ ದೆಹಲಿ ಯ ವಿಶೇಷ ಪ್ರತಿ ನಿಧಿ ,ಮಾಜಿ ಕೇಂದ್ರ ಸಚಿವ ರಾದ ವಿ.ಧನಂ ಜಯ ಕುಮಾರ್ ಅವರ (60 ವರ್ಷ)ಷಷ್ಟ್ಯಬ್ದಿ ಪೂರ್ತಿ ಪ್ರಯುಕ್ತ ಏರ್ಪಡಿ ಸಲಾದ ಬಾಹುಬಲಿ ಸ್ವಾಮಿಯ ಪೂಜಾ ಕಾರ್ಯ ಕ್ರಮ ದಲ್ಲಿ ಘೋಷಿ ಸಿದರು.20 ದಿನ ಗಳೊ ಳಗೆ ಅಂದಾಜು ಪಟ್ಟಿ ಸರ್ಕಾ ರಕ್ಕೆ ಸಲ್ಲಿ ಸಲು ಸೂಚಿಸಿದ ಅವರು ಧನಂಜಯ ಕುಮಾರ್ ಅವರ ಮನವಿಯ ಆಧಾರ ದಲ್ಲಿ ಫಲ್ಗುಣಿ ನದಿಗೆ ಬ್ಯಾರೇಜ್ ನಿರ್ಮಿಸಿ ಸುತ್ತ ಮುತ್ತಲ ಗ್ರಾಮಸ್ಥ ರಿಗೆ ಜೂನ್ ತಿಂಗಳ ವೇಳೆಗೆ ಕುಡಿಯುನ ನೀರು ಒದಗಿಸಲು ವ್ಯವಸ್ಥೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಬೇಕಾದ ಎಲ್ಲಾ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.ವಿ.ಧನಂಜಯ ಕುಮಾರ್ ದಂಪತಿ, ಸಂಸದ ಡಿ.ವಿ.ಸದಾನಂದ ಗೌಡ,ವಿಧಾನ ಸಭಾ ಉಪಾಧ್ಯಕ್ಷ ಎನ್.ಯೋಗಿಶ್ ಭಟ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ,ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಮಾಜಿ ಶಾಸಕ ಪ್ರಭಾಕರ ಬಂಗೇರಾ,ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ,ಮತ್ತಿರತ ಗಣ್ಯರು ಉಪಸ್ಥಿತರಿದ್ದರು.ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು.ಗುಣಪಾಲ ಜೈನ್ ಅವರು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಗೊಮ್ಮಟ ಯಾತ್ರೀ ನಿವಾಸಕ್ಕೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು.