Sunday, May 8, 2011

ಎಂಡೋಸಲ್ಫಾನ್ ನಿಷೇಧಕ್ಕೆ ಸರ್ಕಾರ ಬದ್ಧ

ಮಂಗಳೂರು, ಮೇ.08:ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಆಗಮಿಸಿದ ಸಂದರ್ಭದಲ್ಲಿ ಮೂಡಬಿದರೆ ಸ್ವರಾಜ್ ಮೈದಾನ್ ಹೆಲಿಪ್ಯಾಡಿನಲ್ಲಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಎಂಡೋ ಸಲ್ಫಾನ್ ನಿಷೇ ಧಿಸುವ ಬಗ್ಗೆ, ಮರಳು ನೀತಿಯ ಬಗ್ಗೆ, ರೈತ ರಿಗೆ ನೀಡುವ ಸೌಲಭ್ಯ ಗಳ ಬಗ್ಗೆ ಸರ್ಕಾ ರದ ನಿಲುವಿ ನಲ್ಲಿ ಯಾವುದೇ ಬದ ಲಾವಣೆ ಇಲ್ಲ ಎಂದು ಸ್ಪಷ್ಟ ಪಡಿ ಸಿದರು. ಸ್ವರಾಜ್ ಮೈದಾನ ದಲ್ಲಿ ಮುಖ್ಯ ಮಂತ್ರಿ ಯವ ರನ್ನು ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇ ತಕ ಕೆ. ಅಭಯ ಚಂದ್ರ ಜೈನ್,ವಿಧಾನ ಸಭಾ ಉಪ ಸಭಾ ಪತಿ ಗಳಾದ ಎನ್. ಯೋಗೀಶ್ ಭಟ್, ಇಂಧನ ಸಚಿವ ರಾದ ಶೋಭಾ ಕರಂ ದ್ಲಾಜೆ, ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ನಾಗ ರಾಜ ಶೆಟ್ಟಿ, ವಿಧಾನ ಪರಿ ಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ,ಐಜಿಪಿ ಪಶ್ವಿಮ ವಲಯ ಅಲೋಕ್ ಮೋಹನ್ ಅವರು ಗಳು ಸ್ವಾಗತಿ ಸಿದರು. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ನಾರಾವಿಯ ಸೂರ್ಯನಾರಾಯಣ ದೇಗುಲಕ್ಕೆ ತೆರಳಿದ ಮುಖ್ಯಮಂತ್ರಿಗಳು ನಾರಾವಿ ಪ್ರದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಒಂದು ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.ನಂತರ ಮಂಗಳೂರಿಗೆ ಆಗಮಿಸಿ ಮುಖ್ಯ ಮಂತ್ರಿಗಳು ಜಪ್ಪಿನ ಮೊಗರುವಿನ ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಗುರುವನ ಶ್ರೀ ದುರ್ಗಾ ಕ್ಷೇತ್ರಕ್ಕೆ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು,ಸುತ್ತ ಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದರು.