Wednesday, November 25, 2009

ಮನಾಪ ಕಾರ್ಯವೈಖರಿಗೆ ನಗರಾಭಿವೃದ್ಧಿ ಸಚಿವರಿಂದ ಶ್ಲಾಘನೆ

ಮಂಗಳೂರು,ನ.25:ಮುಖ್ಯಮಂತ್ರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ನೀಡಿರುವ ಒಂದು ಕೋಟಿ ರೂ.ಗಳಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ನಗರ ಭೇಟಿ ಸಂದರ್ಭದಲ್ಲಿ ಸಾರ್ವ ಜನಿಕ ರಿಂದ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದರು. ಜನವರಿ 15ರೊಳಗೆ ದೇಶದಲ್ಲೇ ಪ್ರಥಮ ಎನಿಸುವಂತಹ ನಗರಾಭಿವೃದ್ಧಿ ನೀತಿ ಜಾರಿಗೆ ತರುವ ಬಗ್ಗೆಯೂ ತಿಳಿಸಿದರು.

ರಸ್ತೆ ಅಗಲೀ ಕರಣದಿಂದ ಕೆಳ ಮಧ್ಯಮ ವರ್ಗದ ಜನರಿಗೆ ಆಗಿರುವ ಸಮಸ್ಯೆಗಳ ಹಾಗೂ ಸೆಲ್ಫ್ ಅಸೆಸ್ ಮೆಂಟ್ ಬಗ್ಗೆಯೂ ಸಂಬಂಧ ಪಟ್ಟವರ ಸಭೆಯನ್ನು 5-6 ದಿನಗಳೊಳಗೆ ಕರೆದು ಚರ್ಚಿಸುವ ಭರವಸೆ ನೀಡಿದರು.