
ಮಂಗಳೂರು,ನ.13:ಆಂಧ್ರಪ್ರದೇಶ ಹ್ಯಾಂಡಿಕ್ರಾಫ್ಟ್ಸ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ ಸರ್ಕಾರದ ಜವಳಿ ಮಂತ್ರಾಲಯ ಜಂಟಿಯಾಗಿ ನಗರದ ಹೊಟೆಲ್ ವುಡ್ ಲ್ಯಾಂಡ್ಸ್ ನಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ನವೆಂಬರ್ 5ರಂದು ಮೇಯರ್ ಶಂಕರ್ ಭಟ್ ಅವರು ಉದ್ಘಾಟಿಸಿದರು.

ನವೆಂಬರ್ 16ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ಮ್ಯಾನೇಜರ್ ಕೆ.ವಿ.ಸುಬ್ಬಣ್ಣ ತಿಳಿಸಿದ್ದಾರೆ.