Thursday, May 28, 2009

ಜಿ. ಪಂ. ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಮಂಗಳೂರು, ಮೇ 28:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶ್ರೀ ವೆಂಕಟ್ ದಂಬೆಕೋಡಿ ಅವರು ಮೇ 28ರಂದು ಅಧಿಕಾರ ಸ್ವೀಕರಿಸಿದರು.

ಕ್ರಿಯಾಶೀಲ ಚಟುವಟಿಕೆಗೆ ಸಂಪೂರ್ಣ ಸಹಕಾರದ ಭರವಸೆಯೊಂದಿಗೆ ಮಾಜಿ ಅಧ್ಯಕ್ಷ ಶ್ರೀ ಸುಚರಿತ ಶೆಟ್ಟಿ ಅವರು ದಂಬೆಕೋಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.