Thursday, May 21, 2009

ಜೂನ್ ಆರರಿಂದ ಮತ್ತೆ ಶನಿವಾರಗಳಂದು ಜನಸ್ಪಂದನ

ಮಂಗಳೂರು, ಮೇ 21: ಸರ್ಕಾರವೇ ಗ್ರಾಮೀಣ ಜನರ ಬಳಿಗೆ ತೆರಳುವ ವಿಶಿಷ್ಟ ಕಾರ್ಯಕ್ರಮ ಜನಸ್ಪಂದನ; ಗ್ರಾಮೀಣರು ತಮ್ಮ ಕುಂದುಕೊರತೆಗಳ ನಿವಾರಣೆಗೆ ಜಿಲ್ಲಾ ಕೇಂದ್ರಕ್ಕೆ ಆಗಾಗ ಬರುವ ಕಷ್ಟವನ್ನು ತಪ್ಪಿಸಲು ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ ತಾತ್ಕಾಲಿಕವಾಗಿ ರದ್ದುಗೊಂಡಿತ್ತು. ಈಗ ಮತ್ತೆ ಜಿಲ್ಲೆಯಲ್ಲಿ 6.6.09ರ ಶನಿವಾರದಿಂದ ಎಂದಿನಂತೆ ಪ್ರತಿ ಶನಿವಾರ (ಎರಡನೇ ಶನಿವಾರ ಹೊರತು ಪಡಿಸಿ) ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು ನಡೆಯಲಿವೆ ಎಂದು ಸರ್ಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.