Thursday, September 24, 2009

ನಾಡದೋಣಿಗೆ ಸೀಮೆಎಣ್ಣೆ ಪೂರೈಸುವ ಭರವಸೆ

ಮಂಗಳೂರು,ಸೆ.24:ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯಲ್ಲಾಗುವ ಅಡಚಣೆ ನಿವಾರಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ನೀಡಿದ್ದಾರೆ.
ಸೀಮೆಎಣ್ಣೆ ಪೂರೈಕೆಯಲ್ಲಿ ಆಗುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತಿಯಲ್ಲಿ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಿದ ಪಾಲೆಮಾರ್ ಅವರು ಈ ಭರವಸೆ ನೀಡಿದರು. ನಾಡದೋಣಿ ಮೀನುಗಾರರಿಗೆ ಪ್ರತಿತಿಂಗಳೂ 200 ಲೀ. ಸೀಮೆಎಣ್ಣೆ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಹಲವಾರು ಅರ್ಜಿಗಳು ಬಂದಿದ್ದು, ಪೂರೈಕೆಯಲ್ಲಿ ಲೋಪವಾಗಿದೆ. ಮುಂದಿನ ತಿಂಗಳು ತಲಾ 185 ಲೀ ಎಣ್ಣೆ ನೀಡಲಾಗುವುದು. ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ಅವರು ನೀಡಿದರು.