ಕೇವಲ ರಂಬುಟಾನ್ ಹಣ್ಣಿನಿಂದ ವಾರ್ಷಿಕ ಕ್ವಿಂಟಾಲ್ ಹಣ್ಣು ಮತ್ತು 7 ರಿಂದ 8000 ರೂ.ಗಳನ್ನು ಸಂಪಾದಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಕಾಲು ಹಾದಿಯಲ್ಲಿರುವ ಗುಡ್ಡದ ನಡುವೆ ಇರುವ ಇವರ ಕೃಷಿ ಭೂಮಿಯನ್ನು ಕಾಲು ಹಾದಿಯಲ್ಲೇ ತಲುಪಬೇಕು; ಮನೆಯಿಂದ 3/4 ಕಿ.ಮೀನಷ್ಟು ದೂರವಿರುವ ತೋಟಕ್ಕೆ ತಲೆಯ ಮೇಲೆ ಸಾವಯವ ಗೊಬ್ಬರವನ್ನು ಹೊತ್ತುಕೊಂಡು ತರಬೇಕು. ಏಪ್ರಿಲ್ ನಿಂದ ಜೂನ್ ವರೆಗೆ ಇವರ ಸಾವಯವ ತೋಟಕ್ಕೆ ನೀರು ಇರುವುದಿಲ್ಲ.ಇವರ ಭೂಮಿಯ ಸುತ್ತ ಬೋರ್ ವೆಲ್ ಗಳಿರುವುದರಿಂದ ಬೇಸಿಗೆ ದಿನಗಳಲ್ಲಿ ಇವರ ತೋಟದಲ್ಲಿರುವ ನೀರಿನ ಮೂಲ ಬತ್ತುತ್ತದೆ. ಆದರೂ ಇವರ ತೋಟ ಮಾತ್ರ ಹಸಿರಿನಿಂದ ಕಂಗೊಳಿಸುತ್ತದೆ; ರಾಸಾಯಿನಿಕ ಗೊಬ್ಬರ ಬಳಕೆಯಿಂದ ಭೂಮಿ ಹಾಳು;ಅಲ್ಲದೆ ಹೆಚ್ಚಿನ ಖರ್ಚು,ಇವರು ತಮ್ಮ ತೋಟಕ್ಕೆ ಜೀವಾಮೃತವನ್ನು ಸಹ ಬಳಸುವುದಿಲ್ಲ ಬರೇ ಹಟ್ಟಿ ಗೊಬ್ಬರ. ಇದಕ್ಕಾಗಿ ಅವರು ಕೇವಲ ಎರಡು ಹಸುಗಳನ್ನು ಸಾಕುತ್ತಾರೆ. ಜಾನುವಾರುಗಳನ್ನು ಸಾಕುವುದು ಕೃಷಿ ಕೆಲಸಕ್ಕಿಂತ ಹೆಚ್ಚಿನ ಪರಿಶ್ರಮವನ್ನು ಬೇಡುತ್ತದೆ, ಹಾಗಾಗಿ ಕೇವಲ ಎರಡು ಹಸುಗಳನ್ನು ಸಾಕಿ ಇದರ ಗಂಜಲದಿಂದಲೇ ತಮ್ಮ ತೋಟವನ್ನು ಕಾಪಾಡಿಕೊಂಡಿದ್ದಾರೆ.ಸುಮಾರು 18 ಲೀಟರ್ ನಷ್ಟು ಹಾಲನ್ನು ಮಾರುತ್ತಾರೆ.ಎರಡು ಎಕರೆ ಗುಡ್ಡದಲ್ಲಿ ಕೇವಲ ಒಂದು ಎಕರೆ ಭೂಮಿಯಲ್ಲಿ ಮಾತ್ರ ಕೃಷಿ ಮಾಡಿರುವ ಈ ತೋಟದಲ್ಲಿ ಕಾಲಿಡುವಾಗ ಎಚ್ಚರದಿಂದ ನಡೆಯಬೇಕಾಗುತ್ತದೆ. ಎಲ್ಲಿ ನೋಡಿದರೂ ಗಿಡ,ಮರಗಳು,ಹೂವುಗಳು.ಕೀಟಗಳಿಂದ ಹಣ್ಣನ್ನು ಸಂರಕ್ಷಿಸಲು ಹೂವುಗಳನ್ನು ಬೆಳೆಸಿರುವ ಇವರು, ಮಂಗಗಳ ಹಾವಳಿ ತಡೆಯ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ.ತೆಂಗು,ಅಡಿಕೆ, ರಂಬುಟಾನ್, ಮಲಯನ್ ಆಪಲ್,ಡುರಿಯಾನ್ ಹಣ್ಣು, ಮಲೇಷಿಯನ್ ವೆನಿಲಾ, ಮುಸುಂಬಿ, ವಿವಿಧ ಜಾತಿಯ ಹಲಸು ಗಿಡಗಳನ್ನು ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸಿ ತಂದಿದ್ದಾರೆ. ಕಿತ್ತಳೆ,ಪೇರಳೆ,ಬೀಜ ರಹಿತ ನೀಲಿ, ಬಿಳಿ ನೇರಳೆ, ಚಿಕ್ಕು,ಅಂಜೂರಾ, ಬಾಳೆ,ಡ್ರ್ಯಾಗನ್ ಫ್ರೂಟ್,ಕಾಂಬೋಡಿಯಾ ಮಸ್ಕ್ ಫ್ರೂಟ್,ಥಾಯ್ಲ್ಯಾಂಡ್ ನ ಸ್ನೇಕ್ ಫ್ರೂಟ್ ಸೇರಿದಂತೆ ಹಲವಾರು ಜಾತಿಯ ಹಣ್ಣುಗಳು ಜೊತೆಯಲ್ಲಿ ಕರಿ ಮೆಣಸು,ಏಲಕ್ಕಿ,ಕೋಕ್ಕೋ,ಕಾಫಿ,ನೆಲ್ಲಿಕಾಯಿ,ಹುಣಸೇಗಿಡ,ದೀವಿ ಹಲಸಿನ ಗಿಡ,ನೀರು ಹಲಸು, ಹೆಬ್ಬಲಸು,ಸಿಹಿ ಬಿದಿರು ಗಿಡಗಳನ್ನು ಬೆಳೆಯಲಾಗಿದೆ. ಹಲಸಿನಲ್ಲಿ ಬೆಳಗಾವಿಯಿಂದ ಖಾನಾಪುರ ವೆರೈಟಿ,ಧಾರವಾಡದ ಕಿತ್ತೂರು ರಾಣಿ, ಸಾಗರದ ಚಂದ್ರಬಕ್ಕೆ,ದೊಡ್ಡಬಳ್ಳಾಪುರದ ಹಲಸು, ಲಾಲ್ ಬಾಗ್ ನಿಂದ ತಂದ ಮಧುರಾ,ಜಯಚಂದ್ರ ಹಲಸಿನ ಗಿಡಗಳನ್ನು ಈಗ ಬೆಳೆಸುತ್ತಿದ್ದಾರೆ. ದೀವಿ ಹಲಸಿನ ಮರ ಟೊಳ್ಳಾಗಿರುವುದರಿಂದ ಇದನ್ನು ಹೆಬ್ಬಲಸಿನಿಂದ ಕಸಿ ಮಾಡಲಾಗಿದೆ. ಕರಿಮೆಣಸಿನ ಗಿಡವನ್ನು ಮರಹಿಪ್ಪಲಿಯೊಂದಿಗೆ ಕಸಿ ಮಾಡಿ ಪೊದೆಗಳಂತೆ ಬೆಳೆಸಲಾಗುತ್ತಿದೆ. ಪೇರಳೆ ಗಿಡದಲ್ಲಿ ಬಿಡುವ ಹಣ್ಣು ಒಂದು ಕೆ.ಜ ತೂಕವಿದೆ.! ಇವರ ತೋಟದಲ್ಲಾಗುವ ಪರಿಮಳಭರಿತ ಲಿಂಬೆ ಹಣ್ಣಿಗೆ ಶಾಶ್ವತ ಗ್ರಾಹಕರಿದ್ದಾರೆ.
ಸಮಯಪ್ರಜ್ಞೆ ಮತ್ತು ಮಾಹಿತಿಯಿಂದ ಒಂದೇ ಬೆಳೆಗೆ ಅವಲಂಬಿತರಾಗದೆ,ಕೃಷಿಯಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿರುವ ಇವರು, ಊರ ತರಕಾರಿಗಳಿಗೆ ಬೇಡಿಕೆಯಿರುವ ಸಂದರ್ಭದಲ್ಲಿ ತರಕಾರಿ ಬೆಳೆದು 8 ರಿಂದ 10,000 ರೂ. ಗಳಿಸುತ್ತಾರೆ. ಆಸಕ್ತ ಕೃಷಿಕರಿಗೆ ಮಾತ್ರ ಎಲ್ಲಾ ಮಾಹಿತಿಯನ್ನು ನೀಡಲು ಸಿದ್ಧರಿರುವ ಇವರ ವಿಳಾಸ ಎಡ್ವರ್ಡ್ ರೆಬೆಲ್ಲೋ, ತಾರಿಪಡ್ಪು ನಿವಾಸ, ತಾಕೊಡೆ ಮೂಡಬಿದ್ರೆ- ಮೊಬೈಲ್:9449471542.


















ಮಂಗಳೂರಿನ ಉಳ್ಳಾಲ ಪ್ರದೇಶ,ಹಾಗೂ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ 9 ಗ್ರಾಮ ಪಂಚಾಯತಿಗಳ 12 ಗ್ರಾಮಗಳಿಗೆ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಸರ್ಫೇಸ್ ವಾಟರ್ ಸಿಸ್ಟಮ್ ಅಡಿಯಲ್ಲಿ ನೀರು ಸರಬರಾಜು ಪ್ರಸ್ತಾವನೆಯನ್ನು 22 ಕೋಟಿ ರೂ.ಗಳಿಗೆ ತಯಾರಿಸಲಾಗಿದ್ದು, ಪ್ರಾಯೋಗಿಕವಾಗಿ ಮಂಗಳೂರು ತಾಲೂಕಿನ ಮುನ್ನೂರು ಮತ್ತು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದ್ದು ಇಲ್ಲಿನ ಯಶಸ್ಸಿನ ಬಳಿಕ ಜಲಮರುಪೂರಣ ವ್ಯವಸ್ಥೆಯನ್ನು ಉಳಿದೆಡೆಗಳಲ್ಲಿ ಅನುಷ್ಟಾನಕ್ಕೆ ತರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.



