Monday, June 8, 2009

ಪ್ರಾರ್ಥನ ಮಂದಿರಗಳ ಮೇಲೆ ದಾಳಿ: ಆಯೋಗದಿಂದ ವಿಚಾರಣೆ

ಮಂಗಳೂರು, ಜೂ. 8: ಸೆಪ್ಟೆಂಬರ್ 2008ರಲ್ಲಿ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಯ ಕುರಿತ ವಿಚಾರಣೆಗೆ ನೇಮಿಸಲಾದ ನ್ಯಾಯಮೂರ್ತಿ ಬಿ. ಕೆ. ಸೋಮಶೇಖರ್ ಅವರ ವಿಚಾರಣಾ ಆಯೋಗದ ಕಾನೂನು ಸಲಹೆಗಾರರಾದ ಶ್ರೀಮತಿ ಹೇಮಲತಾ ಮಹಿಷಿ ಅವರು ಇಂದು ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿದರು.
ಈ ಸಂಬಂಧ ಇದುವರೆಗೆ 156 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ರಾಜ್ಯದಿಂದ 995 ದೂರುಗಳನ್ನು ಸ್ವೀಕರಿಸಲಾಗಿದೆ. ಹೈದರಾಬಾದ್ ನಿಂದ ಒಂದು ದೂರನ್ನು ಸ್ವೀಕರಿಸಲಾಗಿದೆ. ಸುಮಾರು 25 ಸ್ಥಳಗಳಿಗೆ ಆಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಂಗಳೂರಿನಿಂದ ಒಟ್ಟು 551 ದೂರುಗಳನ್ನು ದಾಖಲಿಸಲಾಗಿದೆ. 757 ದಾಖಲೆಗಳನ್ನು ಪರಿಶೀಲಿಸಿದೆ. ಇಂದು (8.6.09) 19 ದೂರುಗಳ ವಿಚಾರಣೆ ನಡೆಯಲಿದೆ.