
ಭಾರತ ಸರ್ಕಾರದ ಕಪಾರ್ಟ್ ನೋಡಲ್ ಏಜನ್ಸಿ, ಜನಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಬಳಗ,ಮಂಗಳೂರು ತಾ.ಪಂ ಸಂಯುಕ್ತವಾಗಿ ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 18ನೇ ಅಕ್ಷರೋತ್ಸವ ಹಾಗೂ ಕಾನೂನು ಸಾಕ್ಷರತಾ ಆಂದೋಲನದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶೈಕ್ಷಣಿಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದ್ದು, 18 ವರ್ಷಗಳ ಹಿಂದೆ ಆರಂಭವಾದ ಈ ಆಂದೋಲನ ನಿರಂತರವಾಗಿ ಮುಂದುವರಿದಿದೆ.ಯೋಜನೆಗಳು ಆಂದೋಲನವಾಗಿ ರೂಪುಗೊಂಡಾಗ ಅದರ ಫಲ ನಿರೀಕ್ಷಿತವಾಗಿ ಅರ್ಹರಿಗೆ ತಲುಪುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್ ಎಲ್ಲ ರೀತಿಯ ನೆರವು ಮತ್ತು ಪ್ರೋತ್ಸಾಹವನ್ನು ನೀಡಲಿದೆ ಎಂದರು.
ನಾಲ್ಕು ತಿಂಗಳ ಹಿಂದೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಮ್ಮ ಜಿಲ್ಲೆ ಬಹಳ ಹಿಂದುಳಿದಿತ್ತು;ಆದರೆ ಉದ್ಯೋಗ ಖಾತ್ರಿ ಯೋಜನೆ ಆಂದೋಲನವಾಗಿ ರೂಪು ಪಡೆದ ತಕ್ಷಣ ಯೋಜನೆಗೆ ಹೊಸ ಆಯಾಮ ದೊರಕಿತು.ಈಗಾಗಲೇ 68,670 ಕಾರ್ಡ್ ವಿತರಣೆಯಾಗಿದ್ದು, 5ಕೋಟಿ 39ಲಕ್ಷ ರೂ.ಖರ್ಚಾಗಿದೆ. ರೈತರಿಗೆ,ತೋಟಗಾರಿಕೆಗೆ ಉದ್ಯೋಗ ಖಾತ್ರಿಯಿಂದ ಹೆಚ್ಚಿನ ಲಾಭವಾಗಿದೆ.ಸಾಮಾಜಿಕ ಅಭಿವೃದ್ಧಿ ಆಂದೋಲನಗಳಿಂದ ಮಾತ್ರ ಸಾಧ್ಯ ಎಂದರು.ಇದೇ ಸಂಧರ್ಭದಲ್ಲಿ ಅವಿಭಜಿತ ಜಿಲ್ಲೆಗಳಿಂದ ಆಗಮಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾ ನ್ಯಾಯಾ ಧೀಶ ಕೆಬಿಎಂ ಪಟೇಲ್ ಕಾರ್ಯ ಕ್ರಮ ಉದ್ಘಾ ಸಿದರು.ಶಾಸ ಕರಾದ ಯೋಗೀಶ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಸಾಕ್ಷರರಾದ ಬಿ.ಫಾತುಮಾ ಅಧ್ಯಕ್ಷತೆ ವಹಿಸಿದ್ದರು.ಮುಂಗುಲಿ ಕೊರಗ, ಇ ಒ ಕಾಂತರಾಜ್, ಜನಶಿಕ್ಷಣ ಟ್ರಸ್ಟ್ ನ ಶೀನಶೆಟ್ಟರು ಉಪಸ್ಥಿತರಿದ್ದರು. ಕೃಷ್ಣ ಮೂಲ್ಯರು ಕಾರ್ಯಕ್ರಮ ನಿರೂಪಿಸಿದರು. ಗಿರಿಸಿರಿ ಕಲಾತಂಡ ಕನ್ಯಾನದವರು ಡೋಲುಕುಣಿತ ಪ್ರದರ್ಶಿಸಿದರು.