Thursday, December 31, 2009

ಜಿ.ಪಂ.:119.40 ಕೋಟಿರೂ. ಕರಡು ಯೋಜನೆ

ಮಂಗಳೂರು,ಡಿ.31:2010-11ನೇ ಸಾಲಿಗೆ 119.40ಕೋಟಿ ರೂ.ಗಳ ವಾರ್ಷಿಕ ಕರಡು ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರೂಪಿಸಿದೆ.ಶೈಕ್ಷಣಿಕ ವಲಯಕ್ಕೆ 20.07ಕೋಟಿ,ಕುಟುಂಬಕಲ್ಯಾಣ ಕಾರ್ಯಕ್ರಮಕ್ಕೆ 12.67ಕೋಟಿ ರೂ.,ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ 22.68ಕೋಟಿರೂ.,ಪಂಚಾಯತ್ ರಾಜ್ ಸಂಸ್ಥೆಗಳಿಗೆ13.18ಕೋಟಿರೂಗಳ ಕರಡು ಯೋಜನೆ ರೂಪಿಸಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ನಡೆದ ಜಿಲ್ಲಾ ಪಂಚಾ ಯತ್ ನ 21ನೇ ಸಾಮಾನ್ಯ ಸಭೆಯಲ್ಲಿ ಕರಡು ಯೋಜನೆ ಅನುದಾನದ ವಿವರಗಳನ್ನು ನೀಡಲಾಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ,ಮೂಲಭೂತ ಸೌಕರ್ಯಗಳ ಬಗ್ಗೆ, ರಸ್ತೆ,ವಿದ್ಯುತ್ ಸಂಪರ್ಕ ಯೋಜನೆಗಳ ಬಗ್ಗೆ,ಅಡಿಕೆ ಬೆಳೆಗೆ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಸದಸ್ಯರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಸೆಳೆಯುವ ಭರವಸೆಯನ್ನು ಜಿಲ್ಲಾ ಪಂಚಾಯಿತಿಯಲ್ಲಿ ನೀಡಿದರು. ಸದಸ್ಯರ ಅಭಿವೃದ್ಧಿ ಕಾಮಗಾರಿಕುರಿತ ಅನುದಾನದ ಸಂಶಯಗಳಿಗೆ ಸಿಇಒ ಪಿ.ಶಿವಶಂಕರ್ ಉತ್ತರಿಸಿದರು.ಎಲ್ಲಾ ಸ್ಥಾಯಿಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.