Friday, December 11, 2009

ಸಮಕಾಲೀನ ಪೀಳಿಗೆಯಲ್ಲಿ ತುಳು ಸಂಸ್ಕೃತಿ ಜಾಗೃತಿ:ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಡಿ.11.ಸಾಂಸ್ಕೃತಿಕ ವೈಭವಕ್ಕೆ ಹೆಸರಾದ ಕರ್ನಾಟಕದ ಕರಾವಳಿಯ ಪ್ರಮುಖ ಪ್ರಭಾವಳಿ ತುಳುನಾಡು.ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರಿಸಲು ಮತ್ತು ಪಠ್ಯವಾಗಿ ಸೇರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು:

ಉಜಿರೆಯ ರತ್ನ ವರ್ಮ ಹೆಗಡೆ ಕ್ರೀಡಾ 0ಗಣ ದಲ್ಲಿ ಡಿ.10 ರಿಂದ ನಾಲ್ಕು ದಿನ ಗಳ ಕಾಲ ನಡೆದ ವಿಶ್ವ ತುಳು ಸಮ್ಮೇಳನ-2009 ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ಷೀಣಿ ಸುತ್ತಿರುವ ತುಳು ಭಾಷೆ,ಸಂಸ್ಕೃತಿ ಬಗ್ಗೆ ಸಮ ಕಾಲೀನ ಪೀಳಿಗೆಯಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಮ್ಮೇಳನ ಯಶಸ್ವಿಯಾಗಿದ್ದು,ಈ ನಿಟ್ಟಿನಲ್ಲಿ ದುಡಿಯುತ್ತಿರುವ ತುಳು ಅಕಾಡೆಮಿಗೆ ಸರ್ಕಾರ ಸಂಪೂರ್ಣ ಸಹಕಾರ,ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಕರಾ ವಳಿ ಜಿಲ್ಲೆಯ ಜೀವ ವೈವಿಧ್ಯ ರೆಕ್ಷಣೆಗೆ ಕರಾವಳಿ ಅರಣ್ಯ ಅಭಿವೃದ್ಧಿ ಯೋಜನೆಗೆ ಮೊನ್ನೆ ಯಷ್ಟೆ ಚಾಲನೆ ನೀಡಲಾಗಿದ್ದು,ಇದರಿಂದಾಗಿ ಸಮುದ್ರ ಕೊರೆತದಂತಹ ಪ್ರಮುಖ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿದೆ.ಭತ್ತದ ಕೃಷಿಗೆ ಪ್ರೋತ್ಸಾಹ,ಮೂಲಗೇಣಿ ಸಮಸ್ಯೆ ಪರಿಹಾರ,ಕಂದಾಯ ಇಲಾಖೆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ಸಮ್ಮೇಳನದಲ್ಲಿ ನುಡಿದರು.ಸಮ್ಮೇಳನ ತುಳುವಿಗೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಹಾರೈಸಿದರು.