
ಉಜಿರೆಯ ರತ್ನ ವರ್ಮ ಹೆಗಡೆ ಕ್ರೀಡಾ 0ಗಣ ದಲ್ಲಿ ಡಿ.10 ರಿಂದ ನಾಲ್ಕು ದಿನ ಗಳ ಕಾಲ ನಡೆದ ವಿಶ್ವ ತುಳು ಸಮ್ಮೇಳನ-2009 ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ಷೀಣಿ ಸುತ್ತಿರುವ ತುಳು ಭಾಷೆ,ಸಂಸ್ಕೃತಿ ಬಗ್ಗೆ ಸಮ ಕಾಲೀನ ಪೀಳಿಗೆಯಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಮ್ಮೇಳನ ಯಶಸ್ವಿಯಾಗಿದ್ದು,ಈ ನಿಟ್ಟಿನಲ್ಲಿ ದುಡಿಯುತ್ತಿರುವ ತುಳು ಅಕಾಡೆಮಿಗೆ ಸರ್ಕಾರ ಸಂಪೂರ್ಣ ಸಹಕಾರ,ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಕರಾ ವಳಿ ಜಿಲ್ಲೆಯ ಜೀವ ವೈವಿಧ್ಯ ರೆಕ್ಷಣೆಗೆ ಕರಾವಳಿ ಅರಣ್ಯ ಅಭಿವೃದ್ಧಿ ಯೋಜನೆಗೆ ಮೊನ್ನೆ ಯಷ್ಟೆ ಚಾಲನೆ ನೀಡಲಾಗಿದ್ದು,ಇದರಿಂದಾಗಿ ಸಮುದ್ರ ಕೊರೆತದಂತಹ ಪ್ರಮುಖ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿದೆ.ಭತ್ತದ ಕೃಷಿಗೆ ಪ್ರೋತ್ಸಾಹ,ಮೂಲಗೇಣಿ ಸಮಸ್ಯೆ ಪರಿಹಾರ,ಕಂದಾಯ ಇಲಾಖೆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ಸಮ್ಮೇಳನದಲ್ಲಿ ನುಡಿದರು.ಸಮ್ಮೇಳನ ತುಳುವಿಗೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಹಾರೈಸಿದರು.