Saturday, December 12, 2009

ವಿಶ್ವ ತುಳು ಸಮ್ಮೇಳನ 2009


ಉಜಿರೆ, ಡಿ.12: ಪಲ್ಲಟದ ನೆಲೆ ಎಂಬ ವಿಚಾರದಲ್ಲಿ ತುಳು ಗೋಷ್ಠಿ ತುಳು ನಾಡ ಸಿರಿ ದೋಂಪ ವೇದಿಕೆಯಲ್ಲಿ ನಡೆಯಿತು. ತುಳು ಸಂಸ್ಕೃತಿಯ ಪಲ್ಲಟ, ಸಂಸ್ಕೃತಿಯ ಆಚರಣೆ, ಆರಾಧನಾ ಪದ್ದತಿ,ಕೃಷಿಯ ಮತ್ತು ಕುಲ ಕಸುಬು-ಗ್ರಾಮೀಣ ಕರಕುಶಲ ಕಲೆಗಳ ಕುರಿತು ನಡೆದ ಚಿಂತನಾ ಗೋಷ್ಟಿ ಯಲ್ಲಿ ಮಂಗಳೂರು ವಿ.ವಿ ಯ ರಿಜಿಸ್ಟಾರ್ ಡಾ. ಕೆ. ಚಿನ್ನಪ್ಪ ಗೌಡ, ಡಾ. ನರೇಂದ್ರ ರೈ ದೇರ್ಲಾ ಮತ್ತು ಪ್ರೊ. ತುಕರಾಂ ಪೂಜಾರಿ ಅವರು ತಮ್ಮ ವಿಚಾರಗಳನ್ನು ಸಭೆಯಲ್ಲಿ ಮಂಡಿಸಿದರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ತುಳುನಾಡ ಆರಸರು ಮತ್ತು ವೈಭವ ಕುರಿತು ಸಂಪಾದಿಸಿದ ಸಾಕ್ಷ್ಯ ಚಿತ್ರ 'ಅರಸರನ್ನು ಅರಸುತ್ತಾ 'ವನ್ನು ಪತ್ರಕರ್ತ ಈಶ್ವರ ದೈತೋಟ ಬಿಡುಗಡೆ ಮಾಡಿದರು.


ಪ್ರಮುಖ ವೇದಿಕೆ ತುಳುನಾಡ ಸಿರಿದೊಂಪದಲ್ಲಿ ನಡೆದ ಕವಿಗೋಷ್ಟಿಯನ್ನು ಮುಂಬಾಯಿಯ ಡಾ, ಸುನಿತಾ ಶೆಟ್ಟಿ ಅವರು ಉದ್ಘಾಟಿಸಿದರು. ಮನೋಹರ್ ಪ್ರಸಾದ್, ಮಹಮ್ಮದ್ ಬಡ್ಡೂರು, ಕ್ಯಾತರಿನ್ ರೊಡ್ರಿಗಸ್,ರಘು ಇಡ್ಕಿದು,ಶಕುಂತಳ ಭಟ್ ಮತ್ತಿತರರು ಪಾಲ್ಗೊಂಡಿದ್ದರು.