Friday, October 23, 2009

ನೆರೆ -ನೂರು ಮುಖ ಛಾಯಾಚಿತ್ರ ಪ್ರದರ್ಶನ









ಶತಮಾನದ ಜಲಪ್ರಳಯದಲ್ಲಿ ಉತ್ತರ ಕರ್ನಾಟಕ ಸಂಪೂರ್ಣ ತತ್ತರಿಸಿತು.ಸಂತ್ರಸ್ತ ಜನರ ನೆರವಿಗೆ ಕರ್ನಾಟಕವೇ ಒಗ್ಗೂಡಿತು. ನೆರವಿನ ಮಹಾಪೂರವೇ ಹರಿಯಿತು. ಮುಖ್ಯಮಂತ್ರಿಗಳು ಪ್ರವಾಹಪೀಡಿತ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಖುದ್ದು ಪರಿಹಾರ ವಿತರಣೆಯ ನೇತೃತ್ವವನ್ನು ವಹಿಸಿದರು. ಸಚಿವ ಸಂಪುಟ, ಸಂಘಸಂಸ್ಥೆಗಳು, ಹಗಲಿರುಳು ಪರಿಹಾರ ವಿತರಣೆಯಲ್ಲಿ ತೊಡಗಿವೆ. ಪ್ರಕೃತಿ ವಿಕೋಪ,ಪರಿಹಾರದ ಸಂಪೂರ್ಣ ಚಿತ್ರಗಳ ಪ್ರದರ್ಶನವನ್ನು ವಾರ್ತಾ ಇಲಾಖೆ ಮಂಗಳೂರಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿತು.3ದಿನಗಳ ಕಾಲ ಪ್ರದರ್ಶನ ನಡೆಯಲಿದೆ.ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಪ್ರದರ್ಶನವನ್ನು ಉದ್ಘಾಟಿಸಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಮೀನುಗಾರಿಕ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ . ಕೆ ಎಸ್ ಆರ್ ಟಿ ಸಿ ಡಿಸಿ ಕರುಂಬಯ್ಯ ಪ್ರದರ್ಶನ ವೇಳೆ ಉಪಸ್ಥಿತರಿದ್ದರು.