Thursday, October 15, 2009

ಕೆಇಆರ್ ಸಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮಂಗಳೂರು,ಅ.15: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಅರ್ಜಿ ವಿಚಾರಣೆ ನಡೆಸಿತು. ಆಯೋಗದ ಅಧ್ಯಕ್ಷರಾದ ಕೆ.ಪಿ.ಪಾಂಡೆ, ಸದಸ್ಯರಾದ ವಿ.ಹಿರೇಮಠ, ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.ಒಟ್ಟು 6,284 ಅರ್ಜಿಗಳನ್ನು ಕೆ ಇ ಆರ್ ಸಿ ಸ್ವೀಕರಿಸಿದೆ. ನಾಳೆಯೂ ಆಯೋಗ ದೂರುಗಳನ್ನು ಆಲಿಸಲಿದೆ.