Wednesday, April 15, 2009

ಸರ್ಕಾರಕ್ಕೆ ಯಾವುದೇ ಪಾವತಿ ಬಾಕಿ ಇಲ್ಲ: ಜಿಲ್ಲಾಧಿಕಾರಿ


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಸರ್ಕಾರಕ್ಕೆ ಯಾವುದೇ ಪಾವತಿ ಬಾಕಿ ಇರಿಸಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಸಲ್ಲಿಸಿರುವ ಅಫಿದಾವಿತ್ ನ್ನು ಪರಿಶೀಲಿಸಲಾಗಿ ಸರ್ಕಾರಿ ವಸತಿ, ಜಲ ಮಂಡಳಿ, ವಿದ್ಯುಚ್ಛಕ್ತಿ ಮಂಡಳಿ, ದೂರವಾಣಿ ಇಲಾಖೆ, ಸರ್ಕಾರಿ ಸಾರಿಗೆ(ವಿಮಾನ, ಹೆಲಿಕಾಪ್ಟರ್ ), ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಇತರ ಬಾಕಿಗಳನ್ನು ಅಭ್ಯರ್ಥಿಗಳು ಇರಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.