Thursday, April 30, 2009

ದ. ಕ. ಜಿಲ್ಲೆಯಲ್ಲಿ 74.28% ಮತದಾನ


ಮಂಗಳೂರು, ಏ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ. 30ರಂದು ನಡೆದ ಮತದಾನ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ನಡೆದಿದ್ದು, ಶೇ. 74.28ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.


ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ಚುನಾವಣೆ ಯಶಸ್ವಿಯಾಗಿ ನಡೆದಿದ್ದು, ಮತದಾನದ ಪ್ರಮಾಣ ಹೆಚ್ಚಿದೆ ಎಂದು ವಿವರಿಸಿದರು. ಸುಳ್ಯದಲ್ಲಿ ಅತಿ ಹೆಚ್ಚು ಮತದಾನ ಶೇ. 79 ದಾಖಲಿಸಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 68% ಮತದಾನವಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾರರು ನಿರ್ಭೀತಿಯಿಂದ ಮತಚಲಾಯಿಸಿದ್ದು, 75% ಮತದಾನ ದಾಖಲಾಗಿದೆ. ಎಳನೀರಿನಂತಹ ಪ್ರದೇಶದಲ್ಲಿ % 50 ಮತದಾನವಾಗಿದೆ. ಪುತ್ತೂರಿನಲ್ಲಿ 78% ಮತದಾನವಾಗಿದೆ.


ಮತದಾನದ ಬಗ್ಗೆ ಮಾಹಿತಿಗಾಗಿ ಏರ್ಪಡಿಸಲಾಗಿದ್ದ ಆನ್ ಲೈನ್ ಅಪ್ ಲಿಂಕಿಂಗ್ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಿದ್ದು, ಸಂಪರ್ಕ ಜಾಲ ವ್ಯವಸ್ಥೆ ಯಶಸ್ಸಿನ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಚುನಾವಣೆಯ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ನಗರಪಾಲಿಕೆ ಆಯುಕ್ತ ಸಮೀರ್ ಶುಕ್ಲಾ, ಐ ಎ ಎಸ್ (ಪ್ರೊಬೇಷನರ್ ಡಾ. ತ್ರಿಲೋಕ ಚಂದ್ರ ಉಪಸ್ಥಿತರಿದ್ದರು.